Select Your Language

Notifications

webdunia
webdunia
webdunia
webdunia

ಕನಸಲ್ಲಿ ಕಂಡ ಶಿವಲಿಂಗದ ಶೋಧಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಅಗೆದ ವ್ಯಕ್ತಿ..!

ಕನಸಲ್ಲಿ ಕಂಡ ಶಿವಲಿಂಗದ ಶೋಧಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಅಗೆದ ವ್ಯಕ್ತಿ..!
ಹೈದ್ರಾಬಾದ್ , ಮಂಗಳವಾರ, 6 ಜೂನ್ 2017 (20:17 IST)
ಭಾರತ ಧಾರ್ಮಿಕ ಪರಂಪರೆಯುಳ್ಳ ದೇಶ. ದೇವರು ಎಲ್ಲೆಡೆ ಇದ್ದಾನೆಂಬ ನಂಬಿಕೆ ಜನರಲ್ಲಿದೆ. ದೇವರನ್ನ ಒಲಿಸಿಕೊಳ್ಳಲು ಯಾವುದೇ ಕೆಲಸಕ್ಕೂ ಸಿದ್ಧರಾಗಿಬಿಡುತ್ತಾರೆ. ತೆಲಂಗಾಣದಲ್ಲಿ ಸ್ವಯಂಘೋಷಿತ ದೇವಮಾನವ ಹೇಳಿದ ಮಾತನ್ನ ಕೇಳಿ ಶಿವಲಿಂಗಕ್ಕಾಗಿ ರಾಷ್ಟ್ರೀಯ ಹೆದ್ದಾರಿಯನ್ನೇ ಅಗೆದಿರುವ ಘಟನೆ ತೆಲಂಗಾಣದ ಜಂಗಾನ್ ಜಿಲ್ಲೆಯ ಪೆಂಬರ್ತಿಯಲ್ಲಿ ಈ ಘಟನೆ ನಡೆದಿದೆ.
 

ಸ್ವಯಂ ಘೋಷಿತ ದೇವಮಾನವ ಲಕ್ಷ್ಮಣ್ ಮನೋಜ್ ಎಂಬಾತ, ನನ್ನ ಕನಸಿನಲ್ಲಿ ಶಿವ ಪ್ರತ್ಯಕ್ಷನಾಗಿ ಹೆದ್ದಾರಿ ಇರುವ ಜಾಗದಲ್ಲಿ ಲಿಂಗ ಹುದುಗಿದೆ. ಹೆದ್ದಾರಿ ಅಗೆದು ನನಗೆ ದೇಗುಲ ನಿರ್ಮಿಸುವಂತೆ ಶಿವನು ತಿಳಿಸಿರುವುದಾಗಿ ಗ್ರಾಮಸ್ಥನೊಬ್ಬನಿಗೆ ಹೇಳಿದ್ದಾನೆ. ದೇವಮಾನವನ ಮಾತನ್ನ ನಂಬಿದ ವ್ಯಕ್ತಿ ಜೆಸಿಬಿಗಳ ಮೂಲಕ ವಾರಂಗಲ್ ಮತ್ತು ಹೈದ್ರಾಬಾದ್ ಹೆದ್ದಾರಿಯಲ್ಲಿ 20 ಅಡಿಗಳಷ್ಟು ಗುಂಡಿ ತೆಗೆದಿದ್ದಾನೆ. ಸ್ಥಳೀಯ ಪಾಲಿಕೆ ಉಪಾಧ್ಯಕ್ಷ ಸೇರಿದಂತೆ ಹಲವು ಗ್ರಾಮಸ್ಥರು ಸ್ಥಳದಲ್ಲಿ ಬೀಡುಬಿಟ್ಟು ಲಿಂಗ ದರ್ಶನಕ್ಕೆ ಕಾದಿದ್ದರು. ಎಷ್ಟೇ ಅಗೆದರೂ ಗ್ರಾಮಸ್ಥರಿಗೆ ಶಿವಲಿಂಗ ಸಿಕ್ಕಿಲ್ಲ.

ರಸ್ತೆ ಅಗೆದಿದ್ದರಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯವಾದ್ದರಿಂದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಸ್ವಯಂಘೋಷಿತ ದೇವಮಾನವ ಲಕ್ಷ್ಮಣ್ ಮನೋಜ್ ಅವರನ್ನ ವಿಚಾರಣೆಗೊಳಪಡಿಸಿದ್ದಾರೆ. ಗ್ರಾಮಸ್ಥರನ್ನ ತಪ್ಪು ದಾರಿಗೆಳೆದ ಆರೋಪದಡಿ ಕೇಸ್ ದಾಖಲಾಗಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಕತಾರ್‌ನಿಂದ ಮೈತ್ರಿ ಕಡಿದುಕೊಂಡ ಐದು ಅರಬ್ ರಾಷ್ಟ್ರಗಳು