Select Your Language

Notifications

webdunia
webdunia
webdunia
webdunia

ಹಿರಿಯ ಅಧಿಕಾರಿ ಮೂಗು ಕಚ್ಚಿದ ರೈಲ್ವೆ ಟಿಸಿ

ಹಿರಿಯ ಅಧಿಕಾರಿ ಮೂಗು ಕಚ್ಚಿದ ರೈಲ್ವೆ ಟಿಸಿ
ಭೋಪಾಲ್ , ಶುಕ್ರವಾರ, 24 ಫೆಬ್ರವರಿ 2017 (14:40 IST)
ಟಿಕೆಟ್ ಕಲೆಕ್ಟರ್‌ನೋರ್ವ ಹಿರಿಯ ಅಧಿಕಾರಿಯ ಮೂಗು ಕಚ್ಚಿದ ವಿಲಕ್ಷಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ
ಜಬಲ್ಪುರ ರೈಲ್ವೆ ವಿಭಾಗದ ಕಟ್ನಿ ರೈಲು ನಿಲ್ದಾಣದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಟಿಸಿ ನಾರಾಯಣ ಮೀನಾ ಎಂಬಾತ ಮುಖ್ಯ ಟಿಕೆಟ್ ನಿರೀಕ್ಷಕ ಮನೋಜ್‌ ಶರ್ಮಾರ ಮೂಗಿಗೆ ಕಚ್ಚಿದ್ದಾನೆ ಎನ್ನಲಾಗಿದೆ. 
 
ಗಂಭೀರ ಗಾಯಗೊಂಡಿರುವ ಮನೋಜ್ ಕುಮಾರ್ ಅವರಿಗೆ ಜಬಲ್ಪುರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
 
ಆರೋಪಿ ಮೀನಾ ವಿರುದ್ಧ ಐಪಿಸಿ ವಿಭಾಗ 326ರಡಿ ಪ್ರಕರಣ ದಾಖಲಾಗಿದ್ದು, ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 
 
ಮೀನಾ ಅವರೊಮ್ಮೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾಗ ಮನೋಜ್ ಕುಮಾರ್ ಅವರ ಕೈಯ್ಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಅವರ ವಿರುದ್ಧ ಮನೋಜ್ ಕುಮಾರ್ ಕ್ರಮ ಕೈಗೊಂಡಿದ್ದು ಈ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮೀನಾ ಇಂತಹ ದುಷ್ಕೃತ್ಯವನ್ನೆಸಗಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜೀನಾಮೆ ಹಿಂಪಡೆದ ಜೆಡಿಎಸ್ ಶಾಸಕ ಪಿಳ್ಳಮುನಿಶಾಮಪ್ಪ