Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಪುಸ್ತಕ ಹಿಡಿದು ನಿಂತಿದ್ದ ತಮಿಳುನಾಡು ಧುರೀಣರು!

ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಪುಸ್ತಕ ಹಿಡಿದು ನಿಂತಿದ್ದ ತಮಿಳುನಾಡು ಧುರೀಣರು!
ರಾಮೇಶ್ವರಂ , ಗುರುವಾರ, 27 ಜುಲೈ 2017 (11:18 IST)
ರಾಮೇಶ್ವರಂ: ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂರ ಸ್ಮಾರಕ ಉದ್ಘಾಟನೆಗೆ ಬಂದ ಪ್ರಧಾನಿ ಮೋದಿಯನ್ನು ಸ್ವಾಗತಿಸಲು ತಮಿಳುನಾಡು ರಾಜ್ಯಪಾಲ, ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಧುರೀಣರು ಪುಸ್ತಕ ಹಿಡಿದು ನಿಂತಿದ್ದರು.

 
ಇತ್ತೀಚೆಗಷ್ಟೇ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಧಾನಿ ಮೋದಿಯನ್ನು ಸ್ವಾಗತಿಸುವಾಗ ಹೂ ಬೊಕೆ ನೀಡುವುದರ ಬದಲು ಒಂದು ಪುಸ್ತಕ ಕೊಡಿ ಎಂದು ಗೃಹ ಸಚಿವಾಲಯ ಸುತ್ತೋಲೆ ಹೊರಡಿಸಿತ್ತು. ಅದನ್ನು ತಮಿಳುನಾಡು ನಾಯಕರು ಚಾಚೂ ತಪ್ಪದೆ ಪಾಲಿಸಿದ್ದಾರೆ.

ಪ್ರಧಾನಿ ಮೋದಿಯನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರಾಜ್ಯಪಾಲ ವಿದ್ಯಾಸಾಗರ ರಾವ್, ಮುಖ್ಯಮಂತ್ರಿ ಪಳನಿಸ್ವಾಮಿ ಸೇರಿದಂತೆ ಎಲ್ಲಾ ನಾಯಕರು ಒಂದು ಗುಲಾಬಿ ಹೂ ಮತ್ತು ಒಂದು ಪುಸ್ತಕ ನೀಡಿ ಬರಮಾಡಿಕೊಂಡರು. ಪ್ರಧಾನಿ ಮೋದಿ ಕೂಡಾ ತಮಿಳುನಾಡು ನಾಯಕರ ನಡೆಯನ್ನು ಮೆಚ್ಚಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿತೀಶ್ ರಾಜಕೀಯ ಪಿತೂರಿ ಮೊದಲೇ ಗೊತ್ತಿತ್ತು ಎಂದ ರಾಹುಲ್ ಗಾಂಧಿ