Select Your Language

Notifications

webdunia
webdunia
webdunia
webdunia

5 ಟಿಎಂಸಿ ಕಾವೇರಿ ನೀರು ಬಿಡಲು ಕೋರಿ ಸುಪ್ರೀಂಕೋರ್ಟ್`ಗೆ ಅರ್ಜಿ ಸಲ್ಲಿಸಿದ ತಮಿಳುನಾಡು

5 ಟಿಎಂಸಿ ಕಾವೇರಿ ನೀರು ಬಿಡಲು ಕೋರಿ ಸುಪ್ರೀಂಕೋರ್ಟ್`ಗೆ ಅರ್ಜಿ ಸಲ್ಲಿಸಿದ ತಮಿಳುನಾಡು
ನವದೆಹಲಿ , ಬುಧವಾರ, 5 ಜುಲೈ 2017 (12:19 IST)
ಕಾವೇರಿ ನೀರು ವಿವಾದ ಕುರಿತಂತೆ ಮತ್ತೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಕೂಡಲೇ 5 ಟಿಎಂಸಿ ನೀರು ಬಿಡುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್`ಗೆ ಅರ್ಜಿ ಸಲ್ಲಿಸಿದೆ. 2016ರಲ್ಲಿ 5 ಟಿಎಂಸಿ ನೀರಿನ ಕೊರತೆ ಇದೆ. ಹೀಗಾಗಿ, ಕೂಡಲೇ ನೀರು ಬಿಡುವಂತೆ ಆದೇಶಿಸಬೇಕೆಂದು ತಮಿಳುನಾಡು ವಾದಿಸಿದೆ.

ರಾಜ್ಯದಲ್ಲಿ ನೀರಿನ ಕೊರತೆ ಇದ್ದರೂ ಕರ್ನಾಟಕ ಸರ್ಕಾರ ಕಬಿನಿಯಿಂದ ನೀರು ಬಿಡುತ್ತಿರುವುದಕ್ಕೆ ಆಕ್ರೊಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ನೀರಿಗಾಗಿ ಬೇಡಿಕೆ ಇಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ವರ್ಷರಾಜ್ಯದಲ್ಲಿ ಬರಗಾಲ ಆವರಿಸಿದ್ದರೂ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನ್ಯಾಯ ಮಂಡಳಿ ಸೂಚನೆಯಂತೆ ನೀರು ಹರಿಸಿದೆ. ಆದರೂ, ಈಗ ತಮಿಳುನಾಡು ಹಳೆ ಬಾಕಿ ನೀರನ್ನ ಬಿಡುವಂತೆ ತಗಾದೆ ತೆಗೆದಿದೆ.

ಇದನ್ನೂ ಓದಿ.. 1962ಕ್ಕಿಂತಲೂ ಅಧಿಕ ನಷ್ಟ ಅನುಭವಿಸುತ್ತೀರಿ ಜೋಕೆ: ಭಾರತವನ್ನ ಬೆದರಿಸಿದ ಚೀನಾ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

            

Share this Story:

Follow Webdunia kannada

ಮುಂದಿನ ಸುದ್ದಿ

1962ಕ್ಕಿಂತಲೂ ಅಧಿಕ ನಷ್ಟ ಅನುಭವಿಸುತ್ತೀರಿ ಜೋಕೆ: ಭಾರತವನ್ನ ಬೆದರಿಸಿದ ಚೀನಾ