Webdunia - Bharat's app for daily news and videos

Install App

ಅನೈತಿಕ ಸಂಬಂಧ ಶಂಕೆ: ಪತ್ನಿಗೆ ಪತಿ ಏನ್ ಮಾಡ್ದ ಗೊತ್ತಾ?

Webdunia
ಗುರುವಾರ, 9 ನವೆಂಬರ್ 2023 (13:06 IST)
ಕಳೆದ ಕೆಲ ದಿನಗಳಲ್ಲಿ ಅನೇಕ ಬಾರಿ ಆಕೆ ತನ್ನ ಮೊಬೈಲ್‌ನಲ್ಲಿರುವ ಸಂದೇಶಗಳನ್ನು ಓದಲು ಪತಿಗೆ ಅನುಮತಿ ನೀಡಿರಲಿಲ್ಲ. ಈ ಕಾರಣಕ್ಕೆ ಆತ ಪತ್ನಿಯ ಮೇಲೆ ಅಸಮಾಧಾನಗೊಂಡಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.  

30 ವರ್ಷದ ಪತ್ನಿಯನ್ನು ಆಕೆಯ ಪತಿ ಎರಡು ಅಂತಸ್ತಿನ ಬಂಗಲೆಯ ಮೇಲಿಂದ ಕೆಳಕ್ಕೆ ತಳ್ಳಿದ್ದಾನೆ. ಆಶ್ಚರ್ಯಕರ ವಿಷಯವೆಂದರೆ  ಕೆಳಕ್ಕೆ ದೂಡಿದ್ದ ಪತಿ ಆನಂದ್ ಗಾಯಾಳು ದೀಪಮಾಲಾಳನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾನೆ.ಆಕಸ್ಮಿಕವಾಗಿ ಈ ಘಟನೆ ನಡೆದಿದೆ ಎಂದು ಲಸುದಿಯಾ ಪೊಲೀಸ್ ಠಾಣೆಯ ಅಧಿಕಾರಿಗಳ ಬಳಿ ಮತ್ತು  ಆಸ್ಪತ್ರೆಯ ಸಿಬ್ಬಂದಿಗಳ ಬಳಿ ಆತ ಹೇಳಿಕೆ ನೀಡಿದ್ದಾನೆ. 
 
ತನ್ನ ಮೊಬೈಲ್‌ ಚೆಕ್ ಮಾಡಲು ಅವಕಾಶ ನೀಡದ ಪತ್ನಿಯ ಮೇಲೆ ಕೋಪಗೊಂಡ ಪತಿ ಮಹಾಶಯನೊಬ್ಬ ಆಕೆಯನ್ನು ಎರಡಂತಸ್ತಿನ ಬಂಗಲೆಯ ಮೇಲಿಂದ ಕೆಳಕ್ಕೆ ತಳ್ಳಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ತೀವೃ ಗಾಯಗೊಂಡಿರುವ ಪತ್ನಿ ಈಗ ಭೂಪಾಲ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. 
 
ಪ್ರಜ್ಞೆ ಮರಳಿದ ಬಳಿಕ ದೀಪಮಾಲಾ  ತನ್ನ ಪತಿಯೇ ತನ್ನನ್ನು ಕೆಳಕ್ಕೆ ತಳ್ಳಿರುವ ಸತ್ಯವನ್ನು ತಿಳಿಸಿದ್ದಾಳೆ. ದಂಪತಿಗಳು ಕೇವಲ ನಾಲ್ಕು ದಿನಗಳ ಹಿಂದೆ ಆ ಹೊಸ ಬಂಗಲೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದರು ಎಂದು ತಿಳಿದು ಬಂದಿದೆ. 
 
ಮುಂಜಾನೆಯ ಟೀಯನ್ನು ಮಾಳಿಗೆಯ ಮೇಲೆಯೇ ಕುಡಿಯೋಣ ಎಂದು ಆನಂದ್ ದೀಪಮಾಲಾಳನ್ನು ಆಹ್ವಾನಿಸಿದ. ಮೊಬೈಲ್ ಸಂದೇಶಕ್ಕೆ ಸಂಬಂಧಿಸಿದಂತೆ ಇಬ್ಬರಲ್ಲಿ ವಾಗ್ವಾದ ನಡೆದಿದೆ. ಸಿಟ್ಟಿನ ಭರದಲ್ಲಿ ಆನಂದ್ ಪತ್ನಿಯನ್ನು ಕೆಳಕ್ಕೆ ತಳ್ಳಿದ್ದಾನೆ. 
 
ದೀಪಮಾಲಾಳ ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ತೀವೃ ಪೆಟ್ಟಾಗಿದೆ. ಲಸುದಿಯಾ ಪೊಲೀಸ್ ಠಾಣಾಧಿಕಾರಿ  ಪಿಎಸ್ ರಾನಾವತ್ ಪ್ರಕಾರ  ಆರೋಪಿ ಆನಂದ ಶರ್ಮಾ ಮೇಲೆ  ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು  ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಹಿಳೆಯರು ಯಾಕೆ ಚಿಕ್ಕ ವಯಸ್ಸಿನ ಹುಡುಗನ ಕಡೆಗೆ ಆಕರ್ಷಿತರಾಗುತ್ತಾರೆ

Raja Raguvamshi murder: ಗಂಡನನ್ನು ಕೊಲೆ ಬಗ್ಗೆ ಶಾಕಿಂಗ್ ವಿಚಾರ ಬಾಯ್ಬಿಟ್ಟ ಸೋನಮ್: ತಂದೆ ಫುಲ್ ಸಪೋರ್ಟ್

Siddaramaiah: ಚಿನ್ನಸ್ವಾಮಿ ದುರಂತದ ಬಗ್ಗೆ ಜೊತೆಯಲ್ಲಿದ್ದವರೂ ಹೇಳಲೇ ಇಲ್ವಲ್ಲಪ್ಪಾ.. ಸಿದ್ದರಾಮಯ್ಯ ಅಳಲು

Kerala cargo Ship fire: ಬೇಪೂರ್ ಹಡಗು ಅಗ್ನಿ ದುರಂತ 18 ಮಂದಿ ರಕ್ಷಣೆ video

Karnataka Weather: ಇಂದು ಈ ಜಿಲ್ಲೆಗಳಿಗೆ ಭಾರೀ ಮಳೆ, ಹವಾಮಾನ ಇಲಾಖೆಯ ಎಚ್ಚರಿಕೆ ಗಮನಿಸಿ

ಮುಂದಿನ ಸುದ್ದಿ
Show comments