Select Your Language

Notifications

webdunia
webdunia
webdunia
webdunia

ಶಶಿಕಲಾ ಸಲ್ಲಿಸಿದ್ದ ಅರ್ಜಿ ವಜಾ: ಇಂದೇ ಶರಣಾಗಲು ಸುಪ್ರೀಂಕೋರ್ಟ್ ತಾಕೀತು

ಶಶಿಕಲಾ ಸಲ್ಲಿಸಿದ್ದ ಅರ್ಜಿ ವಜಾ: ಇಂದೇ ಶರಣಾಗಲು ಸುಪ್ರೀಂಕೋರ್ಟ್ ತಾಕೀತು
newdelhi , ಬುಧವಾರ, 15 ಫೆಬ್ರವರಿ 2017 (10:53 IST)
ಜೈಲು ಶಿಕ್ಷೆಯಾದ ಬಳಿಕವೂ ರಾಜಕೀಯ ಮೇಲಾಟದಲ್ಲಿ ತೊಡಗಿರುವ ಅಣ್ಣಾಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾಗೆ ಮತ್ತೆ ಹಿನ್ನಡೆಯಾಗಿದೆ. ಶರಣಾಗತಿಗೆ ಕಾಲಾವಕಾಶ ಕೋರಿ ಸಶಿಕಲಾ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದೆ.


ಕೂಡಲೇ ಬೆಂಗಳೂರಿನ ಸ್ಥಳೀಯ ಕೋರ್ಟ್ ಮುಂದೆ ಶರಣಾಗಿ ಜೈಲಿಗೆ ತೆರಳುವಂತೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ.
ಸುಪ್ರೀಂಕೋರ್ಟ್ ಆದೇಶದ ಬಳಿಕ ಕಂಗೆಟ್ಟಿರುವ ಶಶಿಕಲಾ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಪರಪ್ಪನ ಅಗ್ರಹಾರದ ವಿಶೇಷ ಕೋರ್ಟ್ ಮುಂದೆ ಹಾಜರಾಗಲಿರುವ ಶಶಿಕಲಾ ಕಾನೂನು ಪ್ರಕ್ರಿಯೆಗಳನ್ನಮುಗಿಸಿ ಜೈಲಿಗೆ ಹೋಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರುಕಟ್ಟೆಗೆ ಹೊಚ್ಚ ಹೊಸ ಹೋಂಡಾ ಸಿಟಿ