Select Your Language

Notifications

webdunia
webdunia
webdunia
webdunia

ಮದರ್ ತೆರೇಸಾ ಮೇಲೆ ಆದಿತ್ಯನಾಥ್ ಆರೋಪ: ಬೆಂಬಲಿಸಿದ ಸ್ವಾಮಿ

Subramanian Swamy
ನವದೆಹಲಿ , ಬುಧವಾರ, 22 ಜೂನ್ 2016 (14:18 IST)
ನೊಬೆಲ್ ಪ್ರಶಸ್ತಿ ವಿಜೇತೆ ಮದರ್ ತೆರೇಸಾ ಭಾರತವನ್ನು ಕ್ರಿಶ್ಚಿನೀಕರಣ ಮಾಡುವ ಪಿತೂರಿಯ ಭಾಗವಾಗಿದ್ದರು ಎಂದು ತಮ್ಮ ಪಕ್ಷದ ಸಂಸದ ಯೋಗಿ ಆದಿತ್ಯನಾಥ್ ಅವರು ಮಾಡಿರುವ ಗಂಭೀರ ಆರೋಪಕ್ಕೆ ಬಿಜೆಪಿ ಸಂಸದ ಸಂಸದ ಸುಬ್ರಮಣಿಯನ್ ಸ್ವಾಮಿ ಬೆಂಬಲ ವ್ಯಕ್ತ ಪಡಿಸಿದ್ದಾರೆ. 

ಯೋಗಿ ಆದಿತ್ಯನಾಥ್ ಅವರು ವ್ಯಕ್ತ ಪಡಿಸಿರುವುದು ತಮ್ಮದೇ ಆದ ವೈಯಕ್ತಿಕ ದೃಷ್ಟಿಕೋನವಲ್ಲ. ಕ್ರಿಸ್ಟೋಪರ್ ಹಿಚೆನ್ಸ್ ಬರೆದಿರುವ ಅತಿ ಹೆಚ್ಚು ಮಾರಾಟವಾಗಿ ದಾಖಲೆ ಸೃಷ್ಟಿಸಿದ ಪುಸ್ತಕದಲ್ಲಿ ಇದನ್ನು ಬರೆಯಲಾಗಿದೆ. ನೀವು ಗೂಗಲ್‌ಗೆ ಹೋದರೆ ಆಕೆಯ ಬಗ್ಗೆ ಹಲವಾರು ಪುಸ್ತಕಗಳು ಸಿಗುತ್ತವೆ ಎಂದು ಸ್ವಾಮಿ ಹೇಳಿದ್ದಾರೆ. 
 
ಇದಕ್ಕೆ ಉದಾಹರಣೆಯನ್ನು ಸಹ ನೀಡಿರುವ ಸ್ವಾಮಿ, ಕ್ಯಾಲಿಫೋರ್ನಿಯಾದಲ್ಲೊಮ್ಮೆ ಮಧ್ಯಮ ವರ್ಗದ ಜನರ ಪಿಂಚಣಿ ಲೂಟಿ ಮಾಡಿದವನೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದ. ಆದರೆ ಆತನಿಗೆ ಶಿಕ್ಷೆ ನೀಡಬೇಡಿ ಎಂದು ತೆರೇಸಾ ಪತ್ರ ಬರೆದಿದ್ದರು. ಯಾಕೆಂದರೆ ಆತ ಭಾರತದಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಚಾರಕ್ಕಾಗಿ ಆತ ತೆರೇಸಾಗೆ ಮಿಲಿಯನ್ ಡಾಲರ್‌ನಷ್ಟು ಹಣವನ್ನು ನೀಡಿದ್ದ. ಆಕೆಯ ಪತ್ರವನ್ನು ನೋಡಿ ನ್ಯಾಯಮೂರ್ತಿಗೆ ಆಘಾತವಾಗಿತ್ತು. ತೆರೇಸಾರಂತವರು ಕಠಿಣ ಪರಿಶ್ರಮಿಗಳ ನಿವೃತ್ತಿ ವೇತನವನ್ನು ಯೋಸು ಕ್ರಿಸ್ತನ ಹೆಸರಲ್ಲಿ ದರೋಡೆ ಮಾಡಿದಂತವನ ಪರವಾಗಿ ನಿಲ್ಲುತ್ತಾರೆ ಎಂಬುದು ಶಾಕ್ ಆಗಿದೆ ಎಂದಿದ್ದ ಅವರು ಎಲ್ಲ ಹಣವನ್ನು ಹಿಂತಿರುಗಿಸುವಂತೆ ಅಪರಾಧಿಗೆ ಆದೇಶ ನೀಡಿದ್ದರು. ಈ ರೀತಿ ಅವರಿಗೆ ಛೀಮಾರಿ ಹಾಕಲಾಗಿತ್ತು. ಧಾರ್ಮಿಕ ನಾಯಕಿಗೆ ಕ್ರಿಮಿನಲ್ ಸಹವಾಸವೇಕೆ ಎಂದು ಸ್ವಾಮಿ ಪ್ರಶ್ನಿಸಿದ್ದಾರೆ. 
 
ಶನಿವಾರ ಉತ್ತರ ಪ್ರದೇಶದಲ್ಲಿ ರಾಮಕಥಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನ್ನಾಡುತ್ತಿದ್ದ ಗೋರಕ್ಪುರ ಸಂಸದ ಯೋಗಿ ಆದಿತ್ಯನಾಥ್, "ಭಾರತವನ್ನು ಕ್ರಿಶ್ಚಿನೀಕರಣ ಮಾಡುವ ಕುತಂತ್ರದಲ್ಲಿ ತೆರೇಸಾ ಪಾತ್ರ ಕೂಡ ಇತ್ತು.  ಕ್ರಿಶ್ಚಿಯನೈಸೇಷನ್ ಪ್ರಕರಣಗಳು ಅರುಣಾಚಲ ಪ್ರದೇಶ, ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯ ಭಾಗಗಳಲ್ಲಿ ಪ್ರತ್ಯೇಕತಾವಾದಿ ಚಳುವಳಿಗಳಿಗೆ ಕಾರಣವಾಯಿತು", ಎಂದು ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಪ್ರದೇಶ: 24 ಗಂಟೆಗಳಲ್ಲಿ ಸಿಡಿಲಿನ ಅಬ್ಬರಕ್ಕೆ 46 ಜನ ಬಲಿ