Webdunia - Bharat's app for daily news and videos

Install App

ಒಂದು ಇಲಿ ಹೈಕೋರ್ಟ್ ನ್ಯಾಯಾಧೀಶರನ್ನೇ ರೈಲಿನಿಂದ ಕೆಳಗಿಳಿಸಿತು..!

Webdunia
ಶನಿವಾರ, 4 ನವೆಂಬರ್ 2017 (12:36 IST)
ಒಡಿಶಾ: ರೈಲಿನ ಎಸಿ ಬೋಗಿಯಲ್ಲಿ ಸತ್ತ ಇಲಿ ವಾಸನೆಯಿಂದ ಹೈಕೋರ್ಟ್‌ ನ್ಯಾಯಾಧೀಶರೊಬ್ಬರು ತಮ್ಮ ಪ್ರಯಾಣ ಅರ್ಧಕ್ಕೆ ಮೊಟಕುಗೊಳಿಸಿದ ಘಟನೆ ನಡೆದಿದೆ.


ಒಡಿಶಾ ಹೈಕೋರ್ಟ್‌ ನ್ಯಾಯಾಧೀಶ ಬಿಸ್ವನಾಥ್‌ ರಾಥ್‌ ಶುಕ್ರವಾರ ಭುವನೇಶ್ವರ್‌‌ ನಿಂದ ಆಂಧ್ರದ ವಿಶಾಖಪಟ್ಟಣಂಗೆ ಭುವನೇಶ್ವರ್‌‌-ಮುಂಬೈ ಕೊನಾರ್ಕ್‌ ಎಕ್ಸ್‌ ಪ್ರೆಸ್‌ ಎಸಿ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ, ಖರ್ದಾ ರೋಡ್‌ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ರೈಲಿನಲ್ಲಿ ಸತ್ತ ಇಲಿಯ ವಾಸನೆ ಬಂದಿದೆ. ಇದರಿಂದ ನ್ಯಾ. ಬಿಸ್ವಾನಾಥ್‌ ತಮ್ಮ ಪ್ರಯಾಣ ಅರ್ಧಕ್ಕೆ ಮೊಟಕುಗೊಳಿಸಿ ಬೆರ್ಹಾಮ್‌ ಪುರ್‌ ‌ನಲ್ಲಿ ಇಳಿದಿದ್ದಾರೆ.

ನ್ಯಾ. ಬಿಸ್ವಾನಾಥ್‌ ರಾಥ್‌ ಮತ್ತು ನಾನು ಎ1 ಎಸಿ ಬೋಗಿ 13 ಹಾಗೂ 15ನೇ ಸೀಟ್‌ ‌ನಲ್ಲಿ ಪ್ರಯಾಣಿಸುತ್ತಿದ್ದೆವು. ಖರ್ದಾ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಏನೋ ಕೆಟ್ಟ ವಾಸನೆ ಬರುತ್ತಿದೆ ಕಂಡು ಹಿಡಿಯಿರಿ ಎಂದು ನನಗೆ ಕೇಳಿದರು. ಆಗ ನಾನು ಕಿಟಕಿಯತ್ತ ನೋಡಿದಾಗ ಗ್ಲಾಸಿನ ಮಧ್ಯೆ ಒಂದು ಸತ್ತ ಇಲಿ ಹಾಗೂ ಮೂರು ಜೀವಂತ ಇಲಿಗಳು ಕಂಡು ಬಂದವು ಎಂದು ನ್ಯಾ. ಬಿಸ್ವಾನಾಥ್‌ ಜತೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಸತ್ತ ಇಲಿ ಪತ್ತೆಯಾಗಿರುವುದನ್ನು ಒಪ್ಪಿಕೊಂಡಿರುವ ರೈಲ್ವೆ ಇಲಾಖೆ ಅಧಿಕಾರಿಗಳು, ಬೆರ್ಹಾಮ್‌ ಪುರ್‌‌ ನಿಲ್ದಾಣದಲ್ಲೇ ಕೆಮಿಕಲ್‌ ನಿಂದ ಶುಚಿಗೊಳಿಸಿರುವುದಾಗಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತೀಯ ಮುಸ್ಲಿಮರು ಮತ್ತು ಹಿಂದೂಗಳು ನಡುವೆ ಬೆಂಕಿ ಹೊತ್ತಿಸಲು ಪಾಕ್‌ನಿಂದ ಪ್ರಯತ್ನ: ಅಸಾದುದ್ದೀನ್ ಓವೈಸಿ

ತಕ್ಷಣದ ಕದನ ವಿರಾಮಕ್ಕೆ ಭಾರತ, ಪಾಕಿಸ್ತಾನ ಒಪ್ಪಿಗೆ: ಮಹತ್ವದ ಪೋಸ್ಟ್ ಹಂಚಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ಟಿವಿ ಕಾರ್ಯಕ್ರಮಗಳಲ್ಲಿ ಸೈರನ್ ಮೊಳಗಿಸದಂತೆ ಕೇಂದ್ರ ಸರ್ಕಾರ ನಿರ್ಬಂಧ

Operation Sindoor: ಬೆಟ್ಟಿಂಗ್ ವೇಳೆ ಪಾಕಿಸ್ತಾನ ಪರ ಕೂಗಿದವ ಅರೆಸ್ಟ್‌, ಆಗಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments