Webdunia - Bharat's app for daily news and videos

Install App

ರಾಜ್ಯಸಭೆಯಲ್ಲಿ ಮುಸ್ಲಿಮರ ನಮಾಜ್ ಗೆ ಪ್ರತ್ಯೇಕ ಸಮಯ ರದ್ದು: ಎಲ್ಲರೊಂದೇ ಎಂದ ಸ್ಪೀಕರ್

Webdunia
ಸೋಮವಾರ, 11 ಡಿಸೆಂಬರ್ 2023 (10:45 IST)
ನವದೆಹಲಿ: ಸಂಸತ್ತಿನಲ್ಲಿ ಮುಸ್ಲಿಂ ಸಮುದಾಯದವರ ನಮಾಜ್ ಪ್ರಾರ್ಥನೆಗಾಗಿ ಮೀಸಲಿಟ್ಟಿದ್ದ ಅರ್ಧಗಂಟೆ ಹೆಚ್ಚುವರಿ ಸಮಯಾವಕಾಶವನ್ನು ಸ್ಪೀಕರ್ ಧನ್ ಕರ್ ರದ್ದು ಮಾಡಿದ್ದಾರೆ.

ರಾಜ್ಯ ಸಭೆಯಲ್ಲಿ ಪ್ರತೀ ದಿನ 2 ಗಂಟೆಗೆ ಭೋಜನ ವಿರಾಮದ ಬಳಿಕದ ಕಲಾಪ ಆರಂಭವಾಗುತ್ತದೆ. ಶುಕ್ರವಾರ ಮಾತ್ರ ಮುಸ್ಲಿಂ ಸಮುದಾಯದ ಸಂಸದರ ಅನುಕೂಲಕ್ಕಾಗಿ ಅರ್ಧಗಂಟೆ ಹೆಚ್ಚುವರಿ ಬ್ರೇಕ್ ನೀಡಲಾಗುತ್ತಿತ್ತು.

ಈ ವಿಚಾರವನ್ನು ಡಿಎಂಕೆ ಸದಸ್ಯರೊಬ್ಬರು ಪದ್ಧತಿ ಮುರಿದು 2 ಗಂಟೆಗೆ ರಾಜ್ಯ ಸಭೆ ಕಲಾಪ ಆರಂಭ ಮಾಡಿದ್ದಕ್ಕೆ ಸ್ಪೀಕರ್ ಗೆ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ಈ ರೀತಿ ಎಲ್ಲೂ ನಿಯಮಾವಳಿಯಿಲ್ಲ. ಆದರೆ ಇದುವರೆಗೆ ನಡೆದು ಬಂದ ಪದ್ಧತಿಯಾಗಿತ್ತಷ್ಟೇ ಎಂದಿದ್ದಾರೆ.

ಆದರೆ ಇನ್ನು ಮುಂದೆ ಈ ಪದ್ಧತಿ ಇರಲ್ಲ ಎಂದಿದ್ದಾರೆ. ಸಂಸತ್ತಿನಲ್ಲಿ ಎಲ್ಲಾ ಸಮುದಾಯದವರೂ ಇದ್ದಾರೆ. ಇಲ್ಲಿ ಎಲ್ಲರೂ ಒಂದೇ. ಹಾಗಿರುವಾಗ ಒಂದು ಸಮುದಾಯದವರಿಗೆ ಮಾತ್ರ ವಿನಾಯ್ತಿ ಇರಬಾರದು ಎಂದು ಸ್ಪೀಕರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments