Select Your Language

Notifications

webdunia
webdunia
webdunia
webdunia

ಸಮಾಜವಾದಿ ನಾಯಕನ ಅನುಮಾನಾಸ್ಪದ ಸಾವು

ಸಮಾಜವಾದಿ ನಾಯಕನ ಅನುಮಾನಾಸ್ಪದ ಸಾವು
ಗ್ರೇಟರ್ ನೊಯ್ಡಾ , ಬುಧವಾರ, 1 ಫೆಬ್ರವರಿ 2017 (12:12 IST)
ಸಮಾಜವಾದಿ ಪಕ್ಷದ ನಾಯಕ ಸಂಜಯ್ ನಗರ್ ಅವರು ಮಂಗಳವಾರ ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಮೃತ ಶರೀರ ಸುರಜ್‌ಪುರ್ ಪ್ರದೇಶದಲ್ಲಿ ಮರವೊಂದಕ್ಕೆ ನೇತಾಡುತ್ತಿರುವ ಸ್ಥಿತಿಯಲ್ಲಿ ಕಂಡುಬಂದಿದೆ. 
ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಮೃತನ ಸಂಬಂಧಿಕರು ಮತ್ತು ಬೆಂಬಲಿಗರು ಆರೋಪಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 
 
ಸಂಜಯ್ ಈ ಹಿಂದೆ ಸಮಾಜವಾದಿ ಪಕ್ಷದ ಯುವ ಘಟಕದ ಮಾಜಿ ರಾಜ್ಯ ಕಾರ್ಯದರ್ಶಿಯಾಗಿದ್ದರು. 
 
ಮೃತರು ಧರಿಸಿದ್ದ ಶರ್ಟ್ ಜೇಬಿನಲ್ಲಿ ಡೆತ್ ನೋಟ್ ಸಹ ಸಿಕ್ಕಿದ್ದು, ತಮ್ಮ ಸಾವಿನ ಬಳಿಕ ಮಕ್ಕಳ ಹೊಣೆಗಾರಿಕೆ ವಹಿಸಿಕೊಳ್ಳುವಂತೆ ಪಕ್ಷದ ಹಿರಿಯ ನಾಯಕರಾಗಿರುವ ರಾಜ್‌ಕುಮಾರ್ ಭಾಟಿ, ನರೇಂದ್ರ ನಗರ್,  ಜಿಲ್ಲಾ ಮ್ಯಾಜಿಸ್ಟ್ರೇಟ್ ಎನ್.ಪಿ. ಸಿಂಗ್ ಮತ್ತು ಇತರರಿಗೆ ಅಮತ್ತು ಇತರರಿಗೆ ಮನವಿ ಮಾಡಿಕೊಂಡಿದ್ದಾರೆ. 
 
ಕಳೆದ ಮೂರು ದಿನಗಳ ಹಿಂದೆ ಕೆಲ ವ್ಯಾಪಾರಿಗಳು ಮತ್ತು ಸಂಜಯ್‌ ನಡುವೆ ವಾದ ವಾಗ್ವಾದ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ. 
 
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್: ಕೇಂದ್ರ ಸರಕಾರದ 10 ಪ್ರಮುಖ ಗುರಿಗಳು