Select Your Language

Notifications

webdunia
webdunia
webdunia
webdunia

ಸೋನಿಯಾ ಗಾಂಧಿ ಕೇರಳ ಗುತ್ತಿಗೆದಾರನ ಹಿಂಬಾಕಿ ಪಾವತಿಸಲಿ: ಸ್ವಾಮಿ

ಸುಬ್ರಹ್ಮಣ್ಯಂ ಸ್ವಾಮಿ
ನವದೆಹಲಿ , ಬುಧವಾರ, 8 ಜೂನ್ 2016 (17:54 IST)
ಹಿಂಬಾಕಿ ಪಾವತಿಸದಿರುವ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಕೇರಳದ ಗುತ್ತಿಗೆದಾರನೊಬ್ಬ ಲೀಗಲ್ ನೋಟಿಸ್ ಜಾರಿಗೊಳಿಸಿರುವುದಕ್ಕೆ ಸೋನಿಯಾ ವಿರುದ್ಧ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
 
ಕಾಂಗ್ರೆಸ್ ಮತ್ತು ಕಟ್ಟಡ ನಿರ್ಮಾಣ ಸಂಸ್ಥೆಯೊಂದರ ಮಧ್ಯೆ ಒಪ್ಪಂದವಾಗಿತ್ತು. ಒಂದು ವೇಳೆ ರಾಜ್ಯ ಘಟಕ ಹಿಂಬಾಕಿ ಪಾವತಿಸಲು ವಿಫಲವಾದಲ್ಲಿ ಕೇಂದ್ರ ಘಟಕ ಹಿಂಬಾಕಿ ಪಾವತಿಸಬೇಕಾಗುತ್ತದೆ. ಕಂಪೆನಿ ಖಾಸಗಿ ನೋಟಿಸ್ ಜಾರಿಗೊಳಿಸಿದ್ದರೂ ಅದನ್ನು ನಿರ್ಲಕ್ಷಿಸಿದ್ದಾರೆ. ಆದ್ದರಿಂದ ತಪ್ಪು ಸೋನಿಯಾ ಅವರ ಮೇಲಿದೆ. ಕಾಂಗ್ರೆಸ್ ಮುಖಂಡರು ಪಕ್ಷವನ್ನು ಗೆಲ್ಲಿಸಿದಲ್ಲಿ ಮಾತ್ರ ಬೆಂಬಲ ನೀಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಂತರಿಕ ಭಿನ್ನಮತವಿದೆ ಎಂದು ಹೇಳಿದ್ದಾರೆ.
 
ಹೀದರ್ ಕಟ್ಟಡ ನಿರ್ಮಾಣ ಕಂಪೆನಿಯ ವ್ಯವಸ್ಥಾಪಕ ಪಾಲುದಾರ ರಾಜೀವ್, ಸೋನಿಯಾ ಗಾಂಧಿ ಸೇರಿದಂತೆ ಇತರ ಕಾಂಗ್ರೆಸ್ ನಾಯಕರಿಗೆ ಹಿಂಬಾಕಿ ಪಾವತಿಸುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ.  
 
ನೋಟಿಸ್ ಪಡೆದ ಇತರ ನಾಯಕರೆಂದರೆ, ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಡೆವಲೆಪ್‌ಮೆಂಟ್ ಸ್ಟಡೀಸ್ ಮುಖ್ಯಸ್ಥ ರಮೇಶ್ ಚೆನ್ನಿತಾಲ್, ಕೇರಳದ ಮಾಜಿ ಸಿಎಂ ಒಮ್ಮನ್ ಚಾಂಡಿ ಮತ್ತು ಕೇರಳ ಘಟಕದ ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ಸುಧೀರನ್ ಸೇರಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಪರಮೇಶ್ವರ್ ನಾಯ್ಕ ವಿರುದ್ಧ ದಾಖಲೆ ಬಿಡುಗಡೆ ಸುಳಿವು