Publish Date: Fri, 14 Aug 2026 (11:18 IST)
Updated Date: Fri, 14 Aug 2026 (11:23 IST)
ಉತ್ತರ ಪ್ರದೇಶದ ಲಖನೌ ಸಮೀಪದ ರಹೀಮಾಬಾದ್ನಲ್ಲಿ ಮಾನವೀಯತೆ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. 75 ವರ್ಷದ ಛತ್ರಪಾಲ್ ಎಂಬ ವೃದ್ಧ ತಂದೆ ನಿಧನರಾದ ಬೆನ್ನಲ್ಲೇ, ಅವರ ಏಕೈಕ ಮಗ ಮಹೇಂದ್ರ ಎಂಬಾತ ಆಸ್ತಿ ಕಬಳಿಸುವ ದುರುದ್ದೇಶದಿಂದ ತಂದೆಯ ಶವದ ಹೆಬ್ಬೆರಳ ಗುರುತನ್ನು ಖಾಲಿ ಕಾಗದಗಳ ಮೇಲೆ ಪಡೆದುಕೊಂಡಿದ್ದಾನೆ.
ಪ್ರಕರಣದ ಹಿನ್ನೆಲೆ:
ಮೃತ ಛತ್ರಪಾಲ್ ಅವರು ಬದುಕಿದ್ದಾಗ ಮಗ ಮಹೇಂದ್ರ ಅವರಿಂದ ತೀವ್ರ ಕಿರುಕುಳ ಅನುಭವಿಸಿದ್ದರು. ಇದರಿಂದ ನೊಂದ ತಂದೆ, ಮಗನನ್ನು ತಮ್ಮ ಆಸ್ತಿಯಿಂದ ಹಕ್ಕುಚ್ಯುತಗೊಳಿಸಿ, ಇಡೀ ಜಮೀನನ್ನು ತಮ್ಮ ಹೆಣ್ಣುಮಕ್ಕಳ ಹೆಸರಿಗೆ ವರ್ಗಾಯಿಸಿದ್ದರು. ಜುಲೈ ೯ ರಂದು ಛತ್ರಪಾಲ್ ಅವರು ಕೊನೆಯುಸಿರೆಳೆದ ನಂತರ, ಮಗ ಮಹೇಂದ್ರ ತನ್ನ ಸಂಬಂಧಿಯೊಬ್ಬನ ಜೊತೆ ಸೇರಿಕೊಂಡು ಆಸ್ತಿಯನ್ನು ಕಬಳಿಸಲು ಈ ಅಮಾನವೀಯ ದಾರಿಯನ್ನು ಆಯ್ದುಕೊಂಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್:
ಘಟನೆಯ ಸಮಯದಲ್ಲಿ ಅಲ್ಲಿದ್ದ ಗ್ರಾಮಸ್ಥರು ಮಗ ಮಾಡುತ್ತಿದ್ದ ಈ ಕೃತ್ಯವನ್ನು ಮೊಬೈಲ್ನಲ್ಲಿ ವೀಡಿಯೊ ಚಿತ್ರೀಕರಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವೀಡಿಯೊ ಆಧಾರದ ಮೇಲೆ ರಹೀಮಾಬಾದ್ ಪೊಲೀಸರು ತಕ್ಷಣವೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿ ಮಗ ಹಾಗೂ ಆತನಿಗೆ ಸಹಕರಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ