Select Your Language

Notifications

webdunia
webdunia
webdunia
webdunia

ರಾಹುಲ್ ಗೆ ಕೃತಜ್ನತೆ ಮೂಲಕ ತಿರುಗೇಟು ನೀಡಿದ ಸ್ಮೃತಿ ಇರಾನಿ

ರಾಹುಲ್ ಗೆ ಕೃತಜ್ನತೆ ಮೂಲಕ ತಿರುಗೇಟು ನೀಡಿದ ಸ್ಮೃತಿ ಇರಾನಿ
ನವದೆಹಲಿ , ಶನಿವಾರ, 22 ಜುಲೈ 2017 (11:33 IST)
ನವದೆಹಲಿ:ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರದಲ್ಲಿದ್ದ ನಾಜಿಗಳಂತೆ ವಾಸ್ತವಗಳನ್ನು ತಿರುಚುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸೂಕ್ಷ್ಮವಾಗಿ ತಿರುಗೇಟು ನೀಡಿರುವ ಸಚಿವೆ ಸ್ಮೃತಿ ಇರಾನಿ ನಿಮ್ಮೆಲ್ಲ ಆರೋಪಗಳಿಗೂ ಧನ್ಯವಾದ ಎಂದಿದ್ದಾರೆ.
 
ಟ್ವಿಟರ್ ನಲ್ಲಿ ಹೇಳಿಕೆ ನೀಡಿರುವ ಸ್ಮೃತಿ, ಕಾಂಗ್ರೆಸ್ ಗೆ ಕರಾಲ ಭವಿಷ್ಯ ಕಾಯುತ್ತಿದೆ. ನಮ್ಮ ದೇಶಕ್ಕಲ್ಲ. ಇದನ್ನೆಲ್ಲ ಮಾಡುತ್ತಿರುವುದಕ್ಕೆ ನಿಮಗೆ ಬಿಜೆಪಿಯಿಂದ ಹೃತ್ಪೂರ್ವಕ ಕೃತಜ್ನತೆಗಳು ಎಂದು ತಿಳಿಸಿದ್ದಾರೆ.
 
ನಿಮಗೆ 42 ವರ್ಷವಾದರೂ ಹಿಟ್ಲರ್ ನಿಂದ ಪ್ರೇರಿತವಾದವರು ಯಾರು ಎಂದು ಗೊತ್ತಿಲ್ಲ. ಪ್ರಜಾಪ್ರಭುತ್ವವನ್ನು ದಮನಿಸಿ ತುರ್ತು ಪರಿಸ್ಥಿತಿ ಹೇರಿದ್ದವರು ಯಾರು ಎಂದು ನಿಮ್ಮ ಪಕ್ಷದ ದಾಖಲೆ ನೋಡಿ ಎಂದು 1975ರಲ್ಲಿ ಇಂದಿರಾಗಾಂಧಿ ಜಾರಿಗೊಳಿಸಿದ್ದ ತುರ್ತು ಪರಿಸ್ಥಿತಿಯನ್ನು ನೆನಪಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ನಾಡಧ್ವಜ ವಿವಾದ ಕೆಣಕಿದ ಸಚಿವ ಯುಟಿ ಖಾದರ್