Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ತೆಗಳಿ, ಮೋದಿ, ಅಮಿತ್ ಶಾರನ್ನ ಕೊಂಡಾಡಿದ ಎಸ್.ಎಂ. ಕೃಷ್ಣ

ಕಾಂಗ್ರೆಸ್ ತೆಗಳಿ, ಮೋದಿ, ಅಮಿತ್ ಶಾರನ್ನ ಕೊಂಡಾಡಿದ ಎಸ್.ಎಂ. ಕೃಷ್ಣ
ನವದೆಹಲಿ , ಬುಧವಾರ, 22 ಮಾರ್ಚ್ 2017 (19:43 IST)
ರಾಜೀವ್ ಗಾಂಧಿ ಮತ್ತು ಇಂದಿರಾಗಾಂಧಿ ಕಾಲದಲ್ಲಿಯೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿದ್ದ ಎಸ್.ಎಂ. ಕೃಷ್ಣ 47 ವರ್ಷಗಳ ಕಾಂಗ್ರೆಸ್ ಸಖ್ಯ ತೊರೆದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಕೃಷ್ಣ, ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಅಮಿತ್ ಶಾರನ್ನ ಕೊಂಡಾಡಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ನಾನೀಗ ಬೇಕಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮಾಸ್ ಲೀಡರ್`ಗಳ ಅಗತ್ಯವಿಲ್ಲ. ಸಿಚುಯೇಶನ್ ಮ್ಯಾನೇಜರ್`ಗಳ ಮೇಲೆ ಕಾಂಗ್ರೆಸ್ ಅವಲಂಬನೆಯಾಗಿದೆ ಎಂದಿದ್ದಾರೆ.

ಇದೇವೇಳೆ,. ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಅಮಿತ್ ಶಾ ಅವರ ನಾಯಕತ್ವದಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದೆ. ನನ್ನ ಮುಂದಿನ ಪಯಣಕ್ಕೆ ಅತ್ಯಂತ ಪ್ರಮುಖ ಘಟ್ಟವಿದು ಎಂದು ಕೃಷ್ಣ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ಬುಕ್`ನಲ್ಲಿ ಅತ್ಯಾಚಾರದ ದೃಶ್ಯ ಲೈವ್ ಮಾಡಿದ ಕಾಮುಕರು..!