Publish Date: Thu, 29 Jun 2017 (12:08 IST)
Updated Date: Thu, 29 Jun 2017 (12:13 IST)
ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅದೆಷ್ಟೋ ಭಕ್ತರು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ ಅಂತಹ ಭಕ್ತರಿಗೆ ತಿರುಪತಿ ಆಡಳಿತ ಮಂಡಳಿ ಶಾಕಿಂಗ್ ನ್ಯೂಸ್ ನೀಡಿದೆ.
ಇನ್ನು ಮುಂದೆ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಉಚಿತವಾಗಿ ದಿವ್ಯ ದರ್ಶನ ಮತ್ತು ಲಡ್ಡು ಸಿಗಲ್ಲ. ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಪದ್ಧತಿಗೆ ಬ್ರೇಕ್ ಹಾಕಲು ಟಿಟಿಡಿ ನಿರ್ಧರಿಸಿದೆ.
ಸುಮಾರು 11 ಕಿ.ಮೀ. ಬೆಟ್ಟ ಹತ್ತಿ ಬರುವ ಯಾತ್ರಿಕರಿಗೆ 2 ಲಡ್ಡು ಉಚಿತವಾಗಿ ನೀಡಲಾಗುತ್ತಿತ್ತು. ಆದರೆ ಇದರಿಂದ ಸುಮಾರು 142 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಟಿಟಿಡಿ ಕಾರಣ ನೀಡಿದೆ. ಇದೇ ಕಾರಣಕ್ಕೆ ಉಚಿತ ಲಡ್ಡು ನೀಡುವ ಪದ್ಧತಿ ನಿಲ್ಲಲಿದೆ. ಕೋಟ್ಯಂತರ ರೂ. ಆದಾಯ ತರುವ ತಿರುಪತಿಯಲ್ಲಿ ನಷ್ಟದ ಮಾತೆಲ್ಲಿ ಎಂಬ ಭಕ್ತರ ಪ್ರಶ್ನೆಗೆ ಉತ್ತರವಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ