Select Your Language

Notifications

webdunia
webdunia
webdunia
webdunia

ಶಿವಸೈನಿಕರಿಂದ ಬಿಜೆಪಿ ನಾಯಕನ ಹತ್ಯೆ ಯತ್ನ?

Shiv Sena
ಮುಂಬೈ , ಶುಕ್ರವಾರ, 14 ಅಕ್ಟೋಬರ್ 2016 (10:41 IST)
ಶಿವಸೇನಾ ಕಾರ್ಯಕರ್ತರು ನನ್ನನ್ನು ಕೊಲ್ಲಲು ಯತ್ನಿಸಿದ್ದರು ಎಂದು ಬಿಜೆಪಿ ಸಂಸದ ಕಿರೀಟ್ ಸೋಮಯ್ಯ ಗುರುವಾರ ದೂರಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಲ್ಲಿ ಆಗ್ರಹಿಸಿದ್ದಾರೆ. 
ದಸರಾ ಪ್ರಯುಕ್ತ ಸಬ್ ಅರ್ಬನ್ ಮುಲುಂಡ್‌ನಲ್ಲಿ  ಸೋಮಯ್ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೃಬತ್ ಮುಂಬೈ ಮಹಾನಗರ ಪಾಲಿಕೆಯಲ್ಲಿನ ಭೃಷ್ಟಾಚಾರ ಮಾಫಿಯಾ(ಎಸಿಜಿಎಂ)ದ ಪ್ರತಿಕೃತಿ ದಹಿಸುವ ತಯಾರಿ ನಡೆದಾಗ ಶಿವಸೇನಾ ಕಾರ್ಯಕರ್ತರು ಅದಕ್ಕೆ ಅಡ್ಡಿ ಪಡಿಸಿದರು. ಅಲ್ಲಿದ್ದ ಹಲವರ ಮೇಲೆ ದಾಳಿ ಮಾಡಿದರು. ನನ್ನ ಮೇಲೂ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದರು ಎಂದು ಸೋಮಯ್ಯ ಆರೋಪಿಸಿದ್ದಾರೆ. 
 
ಘಟನೆಯಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇಲ್ಲಿಯವರೆಗೆ 13 ಜನರನ್ನು ಬಂಧಿಸಿದ್ದಾರೆ. 
 
ಎಸಿಜಿಎಂ ಕಳೆದ 20 ವರ್ಷಗಳಿಂದ ಸೇನೆ- ಬಿಜೆಪಿ ಕೈಯ್ಯಲ್ಲಿದ್ದು ಮುಂದಿನ ವರ್ಷ ಚುನಾವಣೆ ನಡೆಯಲಿದೆಯ 
 
ಕಿರೀಟ್ ಈಶಾನ್ಯ ಮುಂಬೈ ಸಂಸದರಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಒಡಿಶಾದಲ್ಲಿ ಮೆದುಳು ಜ್ವರಕ್ಕೆ 50 ಮಕ್ಕಳು ಬಲಿ