Webdunia - Bharat's app for daily news and videos

Install App

ವಕ್ಫ್ ಆಸ್ತಿ ಮಾತ್ರ ಯಾಕೆ, ಹಿಂದೂ ದೇವಾಲಯಗಳ ಹಣ, ಚಿನ್ನ ಬಡವರಿಗೆ ಹಂಚಬೇಕು: ಮೌಲಾನಾ ಹೇಳಿಕೆ

Krishnaveni K
ಬುಧವಾರ, 12 ಮಾರ್ಚ್ 2025 (09:42 IST)
Photo Credit: X
ನವದೆಹಲಿ: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ವಿರುದ್ಧ ಸಿಡಿದೆದ್ದಿರುವ ಮುಸ್ಲಿಂ ಧರ್ಮಗುರು ಮೌಲಾನಾ ಸೈಯದ್ ಕಾಲ್ಬೆ ಜಾವೇದ್ ವಕ್ಫ್ ಮಾತ್ರ ಯಾಕೆ, ಹಿಂದೂ ದೇವಾಲಯಗಳ ಹಣ, ಚಿನ್ನವನ್ನೂ ಬಡವರಿಗೆ ಹಂಚಬೇಕು ಎಂದಿದ್ದಾರೆ.

ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಬಿಲ್ ತಂದು ಹಿಂದೂ-ಮುಸ್ಲಿಂ ನಡುವೆ ಧ್ವೇಷ ಬಿತ್ತುತ್ತಿದೆ. ಮುಸ್ಲಿಮರಿಗೆ ನೋವು ನೀಡಿ ಹಿಂದೂಗಳನ್ನು ಸಂತೋಷಪಡಿಸಲು ಸರ್ಕಾರ ಯತ್ನಿಸುತ್ತಿದೆ. ಆದರೆ ಎರಡೂ ಧರ್ಮಗಳ ನಡುವೆ ಬಿರುಕು ಮೂಡಿಸಲು ನಿಮಗೆ ಸಾಧ್ಯವಿಲ್ಲ ಎಂದಿದ್ದಾರೆ.

‘ವಕ್ಫ್ ಆಸ್ತಿ ಎನ್ನುವುದು ಜನರು ಬಡವರ ಉದ್ದಾರಕ್ಕೆ ದಾನವಾಗಿ ನೀಡಿದ ಆಸ್ತಿ. ಇದಕ್ಕೆ ವಕ್ಫ್ ಬೋರ್ಡ್ ಕೇವಲ ಕಾವಲುಗಾರ ಅಷ್ಟೇ ಮಾಲಿಕನಲ್ಲ. ಕೇಂದ್ರ ಸರ್ಕಾರವೂ ಜನರ ಕಾವಲುಗಾರ, ಯಜಮಾನನಲ್ಲ. ಹಾಗೆ ನೋಡಿದರೆ ಹಲವು ಹಿಂದೂ ದೇವಾಲಯಗಳಲ್ಲಿ ಟನ್ ಗಟ್ಟಲೆ ಚಿನ್ನ, ಹಣವಿದೆ. ಅದನ್ನೆಲ್ಲಾ ಬಡವರಿಗೆ ಹಂಚಲಿ. ಇದರಿಂದ ದೇಶದಲ್ಲಿ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 20 ರೂ.ಗೆ ಇಳಿಕೆಯಾಗಬಹುದು. ನೀವು ಯಾಕೆ ಹಿಂದೂ ದೇವಾಲಯಗಳ ಹಣವನ್ನು ಬಡವರಿಗೆ ಹಂಚಲ್ಲ?’ ಎಂದು ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments