Select Your Language

Notifications

webdunia
webdunia
webdunia
webdunia

ಸೋನಿಯಾ ಗಾಂಧಿ ಆಫರ್ ತಿರಸ್ಕರಿಸಿದ ಶರದ್ ಪವಾರ್

ಸೋನಿಯಾ ಗಾಂಧಿ ಆಫರ್ ತಿರಸ್ಕರಿಸಿದ ಶರದ್ ಪವಾರ್
NewDelhi , ಗುರುವಾರ, 18 ಮೇ 2017 (07:45 IST)
ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಗೆ ತಮ್ಮ ಅಭ್ಯರ್ಥಿ ಆಯ್ಕೆ ಮಾಡುವುದರಲ್ಲಿ ರಾಜಕೀಯ ಪಕ್ಷಗಳು ರೆಡಿ. ಈ ನಡುವೆ ಕಾಂಗ್ರೆಸ್ ಧುರೀಣೆ ನೀಡಿದ್ದ ಆಫರ್ ನ್ನು ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ತಿರಸ್ಕರಿಸಿದ್ದಾರೆ.

 
ರಾಷ್ಟ್ರಪತಿ ಅಭ್ಯರ್ಥಿಯಾಗುವಂತೆ ಸೋನಿಯಾ ಈ ಮೊದಲು ಪವಾರ್ ರನ್ನು ಕೇಳಿಕೊಂಡಿದ್ದರು. ಕಳೆದ ತಿಂಗಳು ಸೋನಿಯಾ ಪವಾರ್ ಗೆ ಆಹ್ವಾನ ಕೊಟ್ಟಿದ್ದರು. ಆದರೆ ಪವಾರ್ ತಮ್ಮನ್ನು ಪರಿಗಣಿಸಬೇಡಿ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಕಾಂಗ್ರೆಸ್ ದೇಶದ ಇತರ ಮಿತ್ರ ಪಕ್ಷದ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸೂಕ್ತ ಅಭ್ಯರ್ಥಿಯ ಆಯ್ಕೆಯ ವಿಚಾರದಲ್ಲಿ ಸಮಾಲೋಚನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಕೆಲವು ನಾಯಕರು ಹಾಲಿ ರಾಷ್ಟ್ರಪತಿಯನ್ನೇ ಬೆಂಬಲಿಸುವ ಇರಾದೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

777888999 ಈ ನಂಬರ್ ನಿಂದ ಕರೆ ಬಂದಿದೆಯಾ?! ಹಾಗಾದರೆ ಎಚ್ಚರವಿರಬೇಕಂತೆ!