ಕಲಿಯುಗದ ಷಹಜಹಾನ್! ಪತ್ನಿಗಾಗಿ ತಾಜ್ಮಹಲ್ ಕಟ್ಟಿದ ಪತಿರಾಯ

Webdunia
ಮಂಗಳವಾರ, 23 ನವೆಂಬರ್ 2021 (09:18 IST)
ಭೋಪಾಲ್ : ಮಧ್ಯಪ್ರದೇಶದ ಶಿಕ್ಷಣ ತಜ್ಞನೊಬ್ಬ ಆಗ್ರಾದ ತಾಜ್ಮಹಲ್ ವಿನ್ಯಾಸವನ್ನೇ ಹೋಲುವ ಸುಂದರ ಸೌಧ ನಿರ್ಮಿಸಿ ಪತ್ನಿಗೆ ಪ್ರೇಮದ ಕಾಣಿಕೆ ನೀಡಿ ಗಮನ ಸೆಳೆದಿದ್ದಾರೆ.
ಬುರ್ಹಾನ್ಪುರ ನಿವಾಸಿ ಆನಂದ್ ಚೌಕ್ಷೆ ಆ ಪ್ರೇಮ ಸೌಧ ನಿರ್ಮಿಸಿದ ಪತಿರಾಯ. ಹಿಂದೊಮ್ಮೆ ಪತ್ನಿ ಮಂಜುಶಾ ಚೌಕ್ಷೆ ಜತೆಗೂಡಿ ಆಗ್ರಾಕ್ಕೆ ಹೋಗಿ ಪ್ರೇಮ ಸೌಧ ನೋಡಿದ್ದ ಆನಂದ್ ಅದರ ವಿನ್ಯಾಸಕ್ಕೆ ಮಾರು ಹೋಗಿದ್ದರು.
ಪತ್ನಿ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಅವರು, ಸುಂದರವಾದ ಒಂದು ಮನೆ ನಿರ್ಮಿಸಿ ಅರ್ಪಿಸಬೇಕು ಎಂಬ ಕನಸು ಕಟ್ಟಿಕೊಂಡಿದ್ದರು. ಮೊದಲು 80 ಅಡಿ ಎತ್ತರದ ಭವ್ಯ ಬಂಗಲೆ ನಿರ್ಮಿಸಬೇಕು ಎಂಬ ಯೋಚನೆಯಲ್ಲಿದ್ದರು. ಆದರೆ, ಅದಕ್ಕೆ ನಗರ ಪಾಲಿಕೆ ಅನುಮತಿ ನಿರಾಕರಿಸಿದ್ದರಿಂದ ಚಿಂತಿತರಾಗಿದ್ದರು. ಅದೇ ಸಂದರ್ಭ ಆಗ್ರಾಕ್ಕೆ ಭೇಟಿ ನೀಡಿದಾಗ ತಾಜ್ಮಹಲ್ ಕಂಡು, ಅಂತಹದ್ದೇ ಪ್ರತಿರೂಪದ ಪ್ರೇಮ ಸೌಧ ಕಟ್ಟಿ ಹೆಂಡತಿಗೆ ಅರ್ಪಿಸಬೇಕೆಂದು ನಿರ್ಧರಿಸಿ ಎಂಜಿನಿಯರ್ಗಳನ್ನು ಸಂಪರ್ಕಿಸಿದ್ದರು.
ಮೂರೇ ವರ್ಷಗಳಲ್ಲಿ ತಾಜ್ ಮಹಲ್ 3ಡಿ ಇಮೇಜ್ ಆಧರಿತ ಪ್ರತಿರೂಪ ನಿರ್ಮಿಸಿದರು. 90 ಚ.ಮೀಟರ್ ವಿಸ್ತಾರ ಹಾಗೂ 60 ಚ.ಮೀ ಎತ್ತರ ಉಳ್ಳ ಪ್ರೇಮ ಸೌಧ ಈಗ ಜನರ ಗಮನ ಸೆಳೆಯುತ್ತಿದೆ. ಈ ತಾಜ್ಮಹಲ್ ಪ್ರತಿರೂಪ ಕಟ್ಟಡ ಎರಡು ಮಹಡಿ ಹೊಂದಿದ್ದು ತಲಾ ಎರಡು ಬೆಡ್ರೂಮ್ಗಳನ್ನು ಹೊಂದಿದೆ. ಅಡುಗೆ ಮನೆ, ಗ್ರಂಥಾಲಯ ಮತ್ತು ಧ್ಯಾನ ಕೊಠಡಿಗಳನ್ನು ಒಳಗೊಂಡಿದೆ. ''ಬುರ್ಹಾನ್ಪುರಕ್ಕೆ ಬರುವ ಪ್ರವಾಸಿಗರು ನನ್ನ ಈ ಪ್ರೇಮ ಸೌಧಕ್ಕೆ ಭೇಟಿ ನೀಡದೇ ಹೋಗಲಾರರು,'' ಎಂದು ಆನಂದ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ, ನಾಳೆ ಲಾಲ್‌ ಕ್ವಿಲಾ ಮೆಟ್ರೋ ನಿಲ್ದಾಣ ಬಂದ್‌

ದೆಹಲಿ ಕಾರು ಸ್ಫೋಟ: ಅಮಿತ್ ಶಾ ರಾಜೀನಾಮೆಗೆ ಹೆಚ್ಚಿದ ಒತ್ತಾಯ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಲಾಲೋಕ ಮಳಿಗೆ, ಏನೆಲ್ಲಾ ಸಿಗಲಿದೆ ಗೊತ್ತಾ

ಕಾರು ಸ್ಫೋಟದ ಹಿಂದಿನ ಪ್ರತಿಯೊಬ್ಬ ಅಪರಾಧಿಯನ್ನು ಭೇಟೆಯಾಡಿ: ಅಮಿತ್ ಶಾ

ದೆಹಲಿಯಲ್ಲಿ ಕಾರು ಸ್ಫೋಟ: ರಾಜ್ಯದ ಈ ಜಿಲ್ಲೆಯಲ್ಲಿ ಹೆಚ್ಚಿನ ಭದ್ರತೆ

ಮುಂದಿನ ಸುದ್ದಿ
Show comments