Webdunia - Bharat's app for daily news and videos

Install App

ಹೆಂಡತಿ ಬರ್ತ್ ಡೇ ತಪ್ಪಿಸಿದರೆ ಇಲ್ಲಿ ಜೈಲೇ ಗತಿ!

Webdunia
ಮಂಗಳವಾರ, 23 ನವೆಂಬರ್ 2021 (08:48 IST)
ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎನ್ನುವುದು ರೂಢಿಯಲ್ಲಿಸರಿಯಾದ ಸಲಹೆ ಇರಬಹುದು.
ಆದರೆ, ಹೆಂಡತಿ ಜಗಳಗಂಟಿಯಾಗಿದ್ದರೂ ಅದನ್ನು ಲೆಕ್ಕಿಸದೆ ಆಕೆಯ ಹುಟ್ಟುಹಬ್ಬವನ್ನು ಸಂಭ್ರಮಿಸಬೇಕು ಎಂದು ಗಂಡನಿಗೆ ಕಟ್ಟಾಜ್ಞೆ ವಿಧಿಸುವುದು ಎಷ್ಟು ಸರಿ? ಅದು ಸರಿಯೋ ತಪ್ಪೊ, ಆದರೆ ಪೆಸಿಫಿಕ್ ಮಹಾಸಾಗರದ ಪಾಲಿನೇಷನ್ ಪ್ರದೇಶದ ಸಮೋವಾ ದ್ವೀಪದಲ್ಲಿ ಮಾತ್ರ ಅಂತಹದ್ದೊಂದು ಕಡ್ಡಾಯ ನಿಯಮ ಇದೆ.
ಪ್ರತಿ ವರ್ಷ ಹೆಂಡತಿಯ ಹುಟ್ಟುಹಬ್ಬವನ್ನು ಗಂಡನಾದವನು ಆಚರಿಸಲೇಬೇಕು ಎನ್ನುವು ಕಾನೂನು ಇದೆ. ಒಂದು ವೇಳೆ ಉದಾಸೀನ ತೋರಿದರೆ ಜೈಲು ಶಿಕ್ಷೆ ಗ್ಯಾರಂಟಿ! ಈ ರಾಷ್ಟ್ರದಲ್ಲಿ ಗಂಡನ ಬರ್ತ್ ಡೇ ಇದ್ದರೆ ಹೆಂಡತಿಯಾದವಳು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕೈಯಲ್ಲಿ ಕಾಸಿದ್ದರೆ ಬಡಪಾಯಿ ಗಂಡನ ಹುಟ್ಟುಹಬ್ಬಕ್ಕೆ ಒಬ್ಬಟ್ಟು ತಟ್ಟಿ ಸಂಭ್ರ-ಮಿಸಬಹುದು. ಇಲ್ಲ ಅಂದರೆ, ಒಣರೊಟ್ಟಿ ತಿಂದು ಮಲಗಬಹುದು. ಆದರೆ ಹೆಂಡತಿಯ ಬರ್ತ್ ಡೇ ಇದ್ದರೆ ಮಾತ್ರ ಪತಿರಾಯ ಮೈಮರೆಯುವಂತಿಲ್ಲ. ಸಂಭ್ರಮಾಚರಣೆ ಕಡ್ಡಾಯ. ಕೈಯಲ್ಲಿ ಕಾಸಿಲ್ಲ, ಆಚರಣೆಗೆ ಸಮಯ ಇಲ್ಲ ಎಂದು ಸಬೂಬು ಹೇಳುವಂತಿಲ್ಲ.
ಹೆಂಡತಿ ಹೇಳಿದ ರೀತಿ ಸಂಭ್ರಮದಿಂದ ಆಕೆಯ ಹುಟ್ಟುಹಬ್ಬ ಆಚರಿಸಲೇ ಬೇಕು. ''ಅಯ್ಯೋ ಮರೆತೆ ಮಾರಾಯ್ತಿ,'' ಎಂದು ನೆಪ ಹೇಳುವಂತಿಲ್ಲ. ''ದುಡ್ಡಿಲ್ಲ ಸುಮ್ಕಿರು,'' ಎಂದು ಗದರಿಸಿ ಸುಮ್ಮನಿರಿಸುವಂತೆಯೂ ಇಲ್ಲ. ಹಾಗೇನಾದರೂ ಉದಾಸೀನ ಮಾಡಿ ಹೆಂಡತಿಯ ಕೆಂಗಣ್ಣಿಗೆ ಗುರಿಯಾದರೆ ಪತಿರಾಯನಿಗೆ ಜೈಲೇ ಗತಿ. ಆದರೂ ಸಮೋವೊ ಕಾನೂನಿನಲ್ಲಿ ಸಣ್ಣದೊಂದು ರಿಯಾಯಿತಿಯೂ ಇದೆ. ಮೊದಲ ಬಾರಿ ಅಂತದ್ದೊಂದು ತಪ್ಪೆಸಗುವ ಪತಿಗೆ ಪೊಲೀಸರು ಬುದ್ಧಿ ಹೇಳಿ ಕಳಿಸಲು ಅವಕಾಶವಿದೆ.
''ಇನ್ನೊಮ್ಮೆ ಆ ರೀತಿ ಮಾಡಬೇಡ ಮಾರಾಯ,'' ಎಂದು ಪೊಲೀ-ಸರು ಹೇಳಿ ಕಳಿಸಿದರೆಂದರೆ ಆತನ 'ಲೈಫ್ ಲೈನ್' ಮುಗಿಯಿತು ಎಂದು ಅರ್ಥ. ಮಾರನೇ ವರ್ಷ ಅದೇ ತಪ್ಪು ಮಾಡಿದರೆ ಪೊಲೀಸರಿಂದಲೂ ಆತನನ್ನು ರಕ್ಷಿಸಲು ಸಾಧ್ಯವಿಲ್ಲ. ಜೈಲು ಕಾಯಂ. ಜಗತ್ತಿನ ವಿವಿಧ ದೇಶಗಳಲ್ಲಿಇಂತಹ ತರಹೇವಾರಿ ವಿಚಿತ್ರ ಕಾನೂನುಗಳು ಇವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಮುಂದಿನ ಸುದ್ದಿ
Show comments