Select Your Language

Notifications

webdunia
webdunia
webdunia
webdunia

ಮೋದಿ ಸರಕಾರಕ್ಕೆ ಮುಖಭಂಗ: ಅರುಣಾಚಲ ಪ್ರದೇಶದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ

ಅರುಣಾಚಲ ಪ್ರದೇಶ
ನವದೆಹಲಿ , ಬುಧವಾರ, 13 ಜುಲೈ 2016 (14:43 IST)
ಅರುಣಾಚಲ ಪ್ರದೇಶದ ಕಾಂಗ್ರೆಸ್ ಸರಕಾರವನ್ನು ವಜಾಗೊಳಿಸಿರುವುದು ಕಾನೂನುಬಾಹಿರವಾಗಿದೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದರಿಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಮುಖಭಂಗವಾದಂತಾಗಿದೆ.
 
ಉತ್ತರಾಖಂಡ್ ನಂತರ ಇದೀಗ ಅರುಣಾಚಲ ಪ್ರದೇಶದಲ್ಲೂ ಕೇಂದ್ರ ಸರಕಾರದ ಸರಕಾರಗಳನ್ನು ವಜಾಗೊಳಿಸುವ ಸಂಚಿಗೆ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
 
ಮುಖ್ಯಮಂತ್ರಿ ಟುಕಿ ವಿರುದ್ಧ 21 ಶಾಸಕರು ಬಂಡಾಯವೆದ್ದ ಸಂದರ್ಭದಲ್ಲಿ ರಾಜ್ಯಪಾಲ ಜೆಪಿ.ರಾಜಖೋವಾ ರಾಜ್ಯಸರಕಾರವನ್ನು ವಜಾಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದರು. ರಾಜ್ಯಪಾಲರ ಶಿಫಾರಸ್ಸಿನ ಅನ್ವಯ ಕೇಂದ್ರ ಸರಕಾರ ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಅಡಳಿತ ಜಾರಿಗೊಳಿಸಿತ್ತು. 
 
ರಾಜ್ಯಪಾಲ ರಾಜಖೋವಾ ರಾಜ್ಯ ಸರಕಾರವನ್ನು ವಜಾಗೊಳಿಸುವ ಶಿಫಾರಸ್ಸಿನಲ್ಲಿ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. 
 
ಕಳೆದ ಡಿಸೆಂಬರ್ 2015 ರಲ್ಲಿ ಅರುಣಾಚಲ ಪ್ರದೇಶ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿತ್ತು. ತದ ನಂತರ ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರ ಬುರ್ಹಾನ್ ವನಿಯನ್ನು ಹಿರೋನಂತೆ ಬಿಂಬಿಸಿದ ಮಾಧ್ಯಮಗಳ ವಿರುದ್ಧ ಪಿಎಂ ಅಸಮಾಧಾನ