Select Your Language

Notifications

webdunia
webdunia
webdunia
webdunia

ವಸುಂಧರಾ ರಾಜೇಯನ್ನು ಸಿಎಂ ಹುದ್ದೆಯಿಂದ ಕಿತ್ತುಹಾಕಿ: ಬಿಜೆಪಿ ಶಾಸಕ

ವಸುಂಧರಾ ರಾಜೇಯನ್ನು ಸಿಎಂ ಹುದ್ದೆಯಿಂದ ಕಿತ್ತುಹಾಕಿ: ಬಿಜೆಪಿ ಶಾಸಕ
ಜೈಪುರ್ , ಸೋಮವಾರ, 13 ಫೆಬ್ರವರಿ 2017 (13:01 IST)
ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಕಾರ್ಯವೈಖರಿಯಿಂದ ಜನತೆ ಅಸಮಾಧಾನಗೊಂಡಿದ್ದು, ಹೈಕಮಾಂಡ್ ಅವರನ್ನು ಕೂಡಲೇ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ ಘನಶ್ಯಾಮ್ ತಿವಾರಿ ವಾಗ್ದಾಳಿ ನಡೆಸಿದ್ದಾರೆ.  
 
ಒಂದು ವೇಳೆ, ರಾಜೇ ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸದಿದ್ದಲ್ಲಿ ರಾಜ್ಯದಲ್ಲಿ ಬಿಜೆಪ ಸರ್ವನಾಶವಾಗಲಿದೆ ಎಂದು ಆರೋಪಿಸಿದ್ದಾರೆ.
 
ಭಾರತೀಯ ಜನ ಸಂಘ ಮುಖಂಡ ದೀನ್ ದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೇತಾಜಿ ಸುಭಾಷ್ ಚಂದ್ರ ಭೋಸ್ ಅವರು ಕಾಣೆಯಾದ ಬಗ್ಗೆ ನಡೆಸಿದ ತನಿಖೆಯಂತೆ ಉಪಾಧ್ಯಾಯ ಅವರ ಸಾವಿನ ಹಿಂದಿರುವ ಕೈವಾಡದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
 
ಸಿಎಂ ವಸುಧರಾ ರಾಜೇ ಜನಸಂಘ ಮತ್ತು ಬಿಜೆಪಿಯ ಸಿದ್ದಾಂತಗಳನ್ನು ಉಲ್ಲಂಘಿಸಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅವರ ವರ್ತನೆಯಿಂದ ಬೇಸತ್ತು ಬಾರ್ಮರ್, ದುಂಗರಾಪುರ್ ಮತ್ತು ಇತರ ಸ್ಥಳಗಳಲ್ಲಿ ಬಿಜೆಪಿ ಶಾಸಕರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
 
ಬಿಜೆಪಿ ಪಕ್ಷವನ್ನು ರಾಜಾ ಮಹಾರಾಜರ ಅಥವಾ ಶ್ರೀಮಂತರ ಪಕ್ಷವಾಗಲು ಬಿಡುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಘನಶ್ಯಾಮ್ ತಿವಾರಿ ಗುಡುಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಐಡಿಯಾಗೆ ನಷ್ಟ ರೂ.384 ಕೋಟಿ