Select Your Language

Notifications

webdunia
webdunia
webdunia
webdunia

ಹಣ ಲೆಕ್ಕ ಮಾಡಿ ಮಾಡಿ ಕ್ಯಾಶಿಯರ್‌ಗೆ ಹೃದಯಾಘಾತ

ಕ್ಯಾಶಿಯರ್‌
ಭೋಪಾಲ್ , ಮಂಗಳವಾರ, 15 ನವೆಂಬರ್ 2016 (08:06 IST)
ನೋಟು ವಿನಿಮಕ್ಕಾಗಿ ಗ್ರಾಹಕರ ಸಂಖ್ಯೆ ವಿಪರೀತವಾದುದರಿಂದ ಕೆಲಸದ ಒತ್ತಡಕ್ಕೊಳಗಾದ ಕ್ಯಾಶಿಯರ್ ಒಬ್ಬರು ಹೃದಯಾಘಾತದಿಂದ ದುರ್ಮರಣವನ್ನಪ್ಪಿದ ಘಟನೆ ಭೋಪಾಲ್‌ನಲ್ಲಿ ನಡೆದಿದೆ.

 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೀಲ್‌ಬಾದ್ ಶಾಖೆಯಲ್ಲಿ ಭಾನುವಾರ ಸಂಜೆ 6 ಗಂಟೆಗೆ ಈ ದುರ್ಘಟನೆ ನಡೆದಿದ್ದು ಮೃತರನ್ನು ಪುರುಷೋತ್ತಮ್ ವ್ಯಾಸ್ (46) ಎಂದು ಗುರುತಿಸಲಾಗಿದೆ.
 
ಅವಿಶ್ರಾಂತವಾಗಿ ಹಣ ವಿನಿಮಯ ಮಾಡುತ್ತ ಕುಳಿತಿದ್ದ ವ್ಯಾಸ್ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರಾಗಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅರೆನಗ್ನ ಚಿತ್ರ ವೀಕ್ಷಣೆ: ಸಚಿವರ ವಿರುದ್ಧ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದ ಜಿ.ಪರಮೇಶ್ವರ್