Select Your Language

Notifications

webdunia
webdunia
webdunia
webdunia

ಗವರ್ನರ್ ವಿರುದ್ಧವೇ ಸಿಡಿದೆದ್ದ ಶಶಿಕಲಾ ನಟರಾಜನ್

ಗವರ್ನರ್ ವಿರುದ್ಧವೇ ಸಿಡಿದೆದ್ದ ಶಶಿಕಲಾ ನಟರಾಜನ್
Chennai , ಭಾನುವಾರ, 12 ಫೆಬ್ರವರಿ 2017 (12:47 IST)
ಚೆನ್ನೈ: ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಇನ್ನೂ ಅವಕಾಶ ನೀಡದ ರಾಜ್ಯಪಾಲರ ವಿರುದ್ಧ ಶಶಿಕಲಾ ನಟರಾಜನ್ ತಿರುಗಿ ಬಿದ್ದಿದ್ದಾರೆ. ವಿನಾಕಾರಣ ನಿಧಾನ ಮಾಡುತ್ತಿರುವ ರಾಜ್ಯಪಾಲರ ವಿರುದ್ಧವೇ ಪ್ರತಿಭಟನೆ ಆರಂಭಿಸಿದ್ದಾರೆ.

 
ಇಂದೂ ಕೂಡಾ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್ ಸುಪ್ರೀಂ ಕೋರ್ಟ್ ಅಕ್ರಮ ಆಸ್ಥಿ ಪ್ರಕರಣದ ತೀರ್ಪು ನೀಡುವವರೆಗೂ ಕಾಯುವಂತೆ ಶಶಿಕಲಾಗೆ ಸೂಚನೆ ನೀಡಿದ್ದಾರೆ. ರಾಜ್ಯಪಾಲರ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಸಂಭವವೂ ಇಲ್ಲದಿಲ್ಲ.

ನಾವು ಪ್ರಜಾಪ್ರಭುತ್ವದ ನೀತಿಗೆ ಅನುಗುಣವಾಗಿ ಎಲ್ಲವೂ ನಡೆಯುತ್ತದೆ ಎಂಬ ವಿಶ್ವಾಸದಲ್ಲಿದ್ದೆವು. ಆದರೆ ಅದು ನಡೆಯುವ ಸೂಚನೆ ಕಂಡುಬರುತ್ತಿಲ್ಲ. ಹೀಗಾಗಿ ಮುಂದಿನ ಹೆಜ್ಜೆ ಇಡದೆ ನಮಗೆ ಬೇರೆ ವಿಧಿಯಿಲ್ಲ ಎಂದು ಶಶಿಕಲಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಬಿಗ್ ಬಾಸ್ ಸ್ಪರ್ಧಿ