Select Your Language

Notifications

webdunia
webdunia
webdunia
webdunia

ಜೈಲಿನಲ್ಲಿರುವ ಶಶಿಕಲಾ ನಟರಾಜನ್ ಗೆ ಲೆಟರ್ ಗಳ ಕಾಟ!

ಜೈಲಿನಲ್ಲಿರುವ ಶಶಿಕಲಾ ನಟರಾಜನ್ ಗೆ ಲೆಟರ್ ಗಳ ಕಾಟ!
Bangalore , ಗುರುವಾರ, 23 ಮಾರ್ಚ್ 2017 (11:23 IST)
ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಶಶಿಕಲಾ ನಟರಾಜನ್ ಗೆ ಲೆಟರ್ ಗಳ ಕಾಟ ಶುರುವಾಗಿದೆಯಂತೆ.


 
ಜೈಲಿನಲ್ಲಿರುವ ಟಾರ್ಚರ್ ಒಂದು ಕಡೆಯಾದರೆ, ತಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿನಿತ್ಯ ಬರುವ ಪತ್ರಗಳ ಕಾಟ ಶಶಿಕಲಾ ನಿದ್ದೆಗೆಡಿಸಿದೆಯಂತೆ. ಫೆಬ್ರವರಿ 15 ರಂದು ಜೈಲು ಸೇರಿದ ನಂತರ ಇದುವರೆಗೆ ಶಶಿಕಲಾ ಹೆಸರಿಗೆ ಸುಮಾರು 100 ಪತ್ರಗಳು ಬಂದಿವೆಯಂತೆ.

 
ಅದರಲ್ಲಿ ಜಯಲಲಲಿತಾ ಸಾವಿಗೆ ನೀವೇ ಕಾರಣ. ಅಮ್ಮನ ಸಾವು ಸಹಜವಲ್ಲ. ನೀವೇ ಮಾಡಿದ ಕೊಲೆ. ನೀವು ಅಮ್ಮನ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿದಿರಿ. ನಿಮಗೆ ಯಾವತ್ತೂ ಒಳ್ಳೆಯದಾಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ವಾಕ್ಯಗಳಿರುತ್ತವಂತೆ.

ಆದರೆ ಈ ಪತ್ರಗಳು ತಮಿಳುನಾಡಿನ ವಿವಿದೆಡೆಯಿಂದ ಬರುತ್ತಿದೆ ಎನ್ನುತ್ತಿದ್ದಾರೆ ಜೈಲು ಅಧಿಕಾರಿಗಳು ಹೇಳುತ್ತಾರೆ. ಸೇಲಂ, ಧರ್ಮಪುರಿ, ಮಧುರೈ,  ತಿರುಚ್ಚಿರಾಪಳ್ಳಿ ಮುಂತಾದೆಡೆಯಿಂದ ಬರುತ್ತಿವೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ಎಂ ಕೃಷ್ಣರನ್ನು ಅದ್ಧೂರಿಯಾಗಿ ಬರಮಾಡಿಕೊಳ್ತಾರಂತೆ ಬಿಎಸ್ ಯಡಿಯೂರಪ್ಪ