Select Your Language

Notifications

webdunia
webdunia
webdunia
webdunia

ಪರಪ್ಪನ ಅಗ್ರಹಾರ ಸೇರಲು ಶಶಿಕಲಾ ನಟರಾಜನ್ ಅನಾರೋಗ್ಯದ ನೆಪ ಒಡ್ಡುವ ಸಾಧ್ಯತೆ

ಪರಪ್ಪನ ಅಗ್ರಹಾರ ಸೇರಲು ಶಶಿಕಲಾ ನಟರಾಜನ್ ಅನಾರೋಗ್ಯದ ನೆಪ ಒಡ್ಡುವ ಸಾಧ್ಯತೆ
Chennai , ಬುಧವಾರ, 15 ಫೆಬ್ರವರಿ 2017 (08:59 IST)
ಚೆನ್ನೈ: ನಮ್ಮ ದೇಶದಲ್ಲಿ ಇದು ಸರ್ವೇ ಸಾಮಾನ್ಯ. ಗಣ್ಯರೆನಿಸಿಕೊಂಡವರು ಬಂಧನಕ್ಕೊಳಗಾಗಬೇಕೆನ್ನುವಾಗ ಹೃದಯಾಘಾತವಾಗುವುದು, ಇನ್ನೇನೋ ಅನಾರೋಗ್ಯದ ನೆಪ ಒಡ್ಡುವುದು. ಇದೀಗ ಶಶಿಕಲಾ ನಟರಾಜನ್ ಕೂಡಾ ಅದೇ ಹಾದಿ ಹಿಡಿಯುವ ಸಾಧ್ಯತೆಯಿದೆ.

 
ತಮ್ಮ ರಾಜಕೀಯ ವೈರಿಗಳನ್ನು ಹತ್ತಿಕ್ಕಲು ಮತ್ತು ಪಕ್ಷವನ್ನು ತಮ್ಮದೇ ಹಿಡಿತದಲ್ಲಿಟ್ಟುಕೊಳ್ಳಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸಮಯ ಬೇಕಾಗುತ್ತದೆ. ಇದಕ್ಕಾಗಿ ಈಗಲೇ ನ್ಯಾಯಾಲಯಕ್ಕೆ ಶರಣಾಗಿ ಬಂಧನಕ್ಕೊಳಗಾದರೆ ಅದೆಲ್ಲಾ ಕಷ್ಟವಾಗಬಹುದು. ಹಾಗಾಗಿ ಅನಾರೋಗ್ಯದ ನೆಪ ಒಡ್ಡಿ ಕೆಲ ಸಮಯದ ನಂತರ ಶರಣಾಗುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ತಮ್ಮ ವಕೀಲರ ಮೂಲಕ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಲು ಚಿಂತನೆ ನಡೆಸಿದ್ದಾರೆ. ಆದರೆ ಆದಾಯ ಮೀರಿದ ಆಸ್ಥಿ ಪ್ರಕರಣದಲ್ಲಿ ಖಡಕ್ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಶಶಿಕಲಾಗೆ ಮತ್ತೆ ವಿನಾಯ್ತಿ ನೀಡುತ್ತದೆಯೇ ಎಂದು ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೇಜರ್ ಸೇರಿದಂತೆ ನಾಲ್ಕು ಯೋಧರು ಹುತಾತ್ಮ