Select Your Language

Notifications

webdunia
webdunia
webdunia
webdunia

ಮೇಜರ್ ಸೇರಿದಂತೆ ನಾಲ್ಕು ಯೋಧರು ಹುತಾತ್ಮ

ಮೇಜರ್ ಸೇರಿದಂತೆ ನಾಲ್ಕು ಯೋಧರು ಹುತಾತ್ಮ
ಶ್ರೀನಗರ , ಬುಧವಾರ, 15 ಫೆಬ್ರವರಿ 2017 (08:28 IST)
ಕಣಿವೆನಾಡಿನಲ್ಲಿ ಮಂಗಳವಾರ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಉಗ್ರರು ಬಲಿಯಾಗಿದ್ದು ಮೇಜರ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಇತರ 8 ಯೋಧರು ಮತ್ತು ಒಬ್ಬ ನಾಗರಿಕ ಗಾಯಗೊಂಡಿದ್ದಾನೆ.

ಕುಪ್ವಾರಾ ಜಿಲ್ಲೆಯ ಕ್ರಾಲ್‌ಗುಂದ್ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದ ಎನ್‌ಕೌಂಟರ್‌ನಲ್ಲಿ ಮನೆಯೊಂದರಲ್ಲಿ ಅಡಗಿದ್ದ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಗುಂಡಿನ ಚಕಮಕಿ ವೇಳೆ ಗಾಯಗೊಂಡಿದ್ದ ಮೇಜರ್ ಎಸ್. ದಹಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 
 
ಅದಕ್ಕೂ ಮುನ್ನ ಮುಂಜಾನೆ ಜಮ್ಮು ಬಂಡಿಪೋರ್  ಜಿಲ್ಲೆಯ ಹಾಜಿನ್ ಪ್ರದೇಶದಲ್ಲಿ ನಡೆದ  ಗುಂಡಿನ ಚಕಮಕಿಯಲ್ಲಿ ಲಷ್ಕರ್‌ ಎ ತಯಬಾ (ಎಲ್‌ಇಟಿ) ಸಂಘಟನೆಯ ಪ್ರಮುಖ ಕಮಾಂಡರ್‌ ಮತ್ತು ಮೂವರು ಯೋಧರು ಬಲಿಯಾಗಿದ್ದಾರೆ. 
 
ಮೃತ ಉಗ್ರನನ್ನು ಪಾಕಿಸ್ತಾನದ ಪ್ರಜೆ ಅಬು ಹ್ಯಾರಿಸ್‌ ಎಂದು ಗುರುತಿಸಲಾಗಿದೆ. ಈತ ಎಲ್‌ಇಟಿಯ ಪ್ರಮುಖ ಕಮಾಂಡರ್‌ಗಳಲ್ಲೊಬ್ಬ ಎನ್ನಲಾಗುತ್ತಿದೆ. ಮತ್ತೆ ಮೂವರು ಉಗ್ರರು ಸ್ಥಳದಿಂದ ಪರಾರಿಯಾಗಲು ಯಶಸ್ವಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಸ್ರೋದಿಂದ ಇಂದು ಹೊಸ ಸಾಹಸ