Publish Date: Thu, 23 Feb 2017 (09:57 IST)
Updated Date: Thu, 23 Feb 2017 (10:00 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ವಾಸ ಆರಂಭವಾಗಿ ಒಂದು ವಾರ ಕಳೆದಿದೆ. ಇದೀಗ ತಾನು ವಯೋಸಹಜವಾಗಿ ಬಳಲಿದ್ದೇನೆ, ಆರೋಗ್ಯವೂ ಕ್ಷೀಣಿಸಿದೆ ಇನ್ನಷ್ಟು ಉತ್ತಮ ಸೌಲಭ್ಯ ಕೊಡಿಸಿ ಎಂದು ಮನವಿ ಮಾಡುತ್ತಿದ್ದಾರಂತೆ.
ಒಂದೇ ವಾರಕ್ಕೆ ಜೈಲು ವಾಸದಿಂದ ಸುಸ್ತಾಗಿರುವ ಚಿನ್ನಮ್ಮನ ಆರೋಗ್ಯದಲ್ಲೇನೂ ಏರುಪೇರಾಗಿಲ್ಲ. ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಆದರೂ ಉತ್ತಮ ಸೌಲಭ್ಯಕ್ಕಾಗಿ ಆಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಎಐಎಡಿಎಂಕೆ ಪಕ್ಷದ ಮೂಲಗಳು ತಿಳಿಸಿವೆ.
ಒಂದು ಮಂಚ, ಟೇಬಲ್ ಫ್ಯಾನ್, ಚಾಪೆ, ಅಟ್ಯಾಚ್ಡ್ ಬಾತ್ ರೂಂ ಸೇರಿದಂತೆ ಚೆನ್ನೈ ಜೈಲಿಗೆ ವರ್ಗವಾಗುವವರೆಗೆ ಸುಗಮವಾಗಿ ಕಾಲ ಕಳೆಯಲು ಬೇಕಾದ ವ್ಯವಸ್ಥೆ ಮಾಡಿಕೊಡಲು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಖೈದಿಗಳ ಆರೋಗ್ಯದ ದೃಷ್ಟಿಯಿಂದ ಒಂದು ಜೈಲಿನಿಂದ ಇನ್ನೊಂದು ಜೈಲಿಗೆ ವರ್ಗವಾಗಲು ಕಾನೂನಿನಲ್ಲಿ ಅವಕಾಶವಿದೆ. ಇದನ್ನು ಶಶಿಕಲಾ ಬಳಸಿಕೊಳ್ಳುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ