Select Your Language

Notifications

webdunia
webdunia
webdunia
webdunia

ಮನೋಹರ್ ಪರಿಕ್ಕರ್ ಹಿಂದೂಗಳನ್ನು ವಂಚಿಸಿದ್ದಾರೆ: ಆರೆಸ್ಸೆಸ್ ಮುಖ್ಯಸ್ಥ

ಮನೋಹರ್ ಪರಿಕ್ಕರ್ ಹಿಂದೂಗಳನ್ನು ವಂಚಿಸಿದ್ದಾರೆ: ಆರೆಸ್ಸೆಸ್ ಮುಖ್ಯಸ್ಥ
ಪಣಜಿ , ಗುರುವಾರ, 1 ಸೆಪ್ಟಂಬರ್ 2016 (19:48 IST)
ಗೋವಾ ರಾಜ್ಯದ ಆರೆಸ್ಸೆಸ್ ಮುಖ್ಯಸ್ಥ ಸುಭಾಷ್ ವೆಲಿಂಗಕರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದ ಮಾರನೇ ದಿನವೇ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

 
ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಅಲ್ಪಸಂಖ್ಯಾತರನ್ನು ಓಲೈಸುತ್ತಾ ಹಿಂದೂಗಳನ್ನು ವಂಚಿಸಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿ, ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
 
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮುಂಬರುವ ದಿನಗಳಲ್ಲಿ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. 
 
ಕಳೆದ ಎರಡು ದಶಕಗಳಿಂದ ಗೋವಾ ರಾಜ್ಯದ ಆರೆಸ್ಸೆಸ್ ಮುಖ್ಯಸ್ಥರಾಗಿದ್ದ ವೆಲಿಂಗಕರ್, ನನಗೆ ಯಾವುದೇ ರಾಜಕೀಯ ಮಹತ್ವಕಾಂಕ್ಷೆಯಿಲ್ಲ. ಆದರೆ, ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಗುಡುಗಿದ್ದಾರೆ.
 
ವೆಲಿಂಗಕರ್ ಅವರನ್ನು ವಜಾಗೊಳಿಸಿರುವುದನ್ನು ವಿರೋಧಿಸಿ ಈಗಾಗಲೇ 400 ಆರೆಸ್ಸೆಸ್ ಕಾರ್ಯಕರ್ತರು ಆರೆಸ್ಸೆಸ್ ತೊರೆದಿದ್ದಾರೆ. ಮುಂದಿನ ವರ್ಷ ಗೋವಾದಲ್ಲಿ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ವೆಲಿಂಗಕರ್ ಘಟನೆ ಯಾವ ರೀತಿ ಪ್ರಭಾವ ಬೀರುತ್ತದೆಯೋ ಎನ್ನುವುದನ್ನು ಕಾದು ನೋಡಬೇಕಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮಸೀದಿ ನಿರ್ಮಾಣಕ್ಕೆ ಹಣ ನೀಡಿ, ನಮಾಜ್ ಮಾಡಲು ಅವಕಾಶ ಕೊಟ್ಟ ಅಯೋಧ್ಯೆ ದೇವಾಲಯ