Select Your Language

Notifications

webdunia
webdunia
webdunia
webdunia

ಶಬರಿಮಲೆ ಚಿನ್ನ ಕಳವು ಪ್ರಕರಣ: ತನಿಖೆ ಸಂಬಂಧ ಮಹತ್ವದ ಬೆಳವಣಿಗೆ

Sabarimala gold theft case

Sampriya

ಚೆನ್ನೈ , ಶುಕ್ರವಾರ, 26 ಡಿಸೆಂಬರ್ 2025 (19:44 IST)
ಚೆನ್ನೈ: ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಪ್ರಕರಣದ ಆರೋಪ ಹೊಂದಿರುವ ಡಿ ಮಣಿ ಅಲಿಯಾಸ್ ಬಾಲಮುರುಗನ್ ಅವರ ನಿವಾಸದ ಮೇಲೆ ದಾಳಿ ನಡೆಸಿದೆ.

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ತನಿಖೆಯ ಭಾಗವಾಗಿ, ಎಸ್‌ಐಟಿ ಈ ಹಿಂದೆ ಮಣಿಯ ಸಹಚರ ಶ್ರೀಕೃಷ್ಣನ್ ಅವರನ್ನು ವಿಚಾರಣೆ ನಡೆಸಿತ್ತು.

 ಡಿ ಮಣಿ ಅವರ ಗುಂಪು ಕೇರಳದ ದೇವಾಲಯಗಳನ್ನು ಗುರಿಯಾಗಿಟ್ಟುಕೊಂಡು ದೊಡ್ಡ ಪ್ರಮಾಣದ ಕಳ್ಳತನವನ್ನು ಯೋಜಿಸಿತ್ತು ಎಂದು ಉದ್ಯಮಿಯೊಬ್ಬರು ಬಹಿರಂಗಪಡಿಸಿದ್ದಾರೆ. ಬಹಿರಂಗಪಡಿಸುವಿಕೆಯ ಪ್ರಕಾರ, ಗ್ಯಾಂಗ್ ಸುಮಾರು 1,000 ಕೋಟಿ ಮೌಲ್ಯದ ಕಳ್ಳತನದ ಗುರಿಯನ್ನು ಹೊಂದಿತ್ತು. ಶಬರಿಮಲೆ ಜೊತೆಗೆ ಶ್ರೀಪದ್ಮನಾಭಸ್ವಾಮಿ ದೇವಸ್ಥಾನದಲ್ಲೂ ವಂಚನೆ ನಡೆಸಲು ಈ ಗುಂಪು ಯೋಜನೆ ರೂಪಿಸಿತ್ತು ಎಂದು ಮೂಲಗಳು ತಿಳಿಸಿವೆ.

ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ಉದ್ಯಮಿಗಳ ಹೇಳಿಕೆಯನ್ನು ಬಹಿರಂಗಗೊಳಿಸಿದ್ದಾರೆ. ಶಬರಿಮಲೆಯಿಂದ ಕೊಂಡೊಯ್ದ ಪಂಚಲೋಹದ ವಿಗ್ರಹಗಳನ್ನು ಈ ತಂಡ ಅಂತಾರಾಷ್ಟ್ರೀಯ ಪುರಾತನ ಕಳ್ಳಸಾಗಣೆ ದಂಧೆಗೆ ಮಾರಾಟ ಮಾಡಿತ್ತು ಎಂದು ಉದ್ಯಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾನವಿ ಆತ್ಮಹತ್ಯೆ ಪ್ರಕರಣ: ಫಸ್ಟ್‌ನೈಟ್ ದಿನವೇ ಸೂರಜ್ ನಪುಂಸಕ ಎಂದು ಗೊತ್ತಾಗಿತ್ತು