Select Your Language

Notifications

webdunia
webdunia
webdunia
webdunia

ಆರೆಸ್ಸೆಸ್ ಸಿದ್ಧಾಂತ ದೇಶಕ್ಕೆ ಮಾರಕ: ನಿತೀಶ್ ಕುಮಾರ್

ಆರೆಸ್ಸೆಸ್ ಸಿದ್ಧಾಂತ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ಧಾಂತ ದೇಶಕ್ಕೆ ಒಳ್ಳೆಯದಲ್ಲ. ಆದ್ದರಿಂದ ಬಿಜೆಪಿಯೇತರ ಪಕ್ಷಗಳು ಬಿಜೆಪಿಯ ವಿರುದ್ಧ ಒಂದಾಗುವುದು ಅಗತ್ಯವಾಗಿದೆ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆ ನೀಡಿದ್ದಾರೆ.
 
ಆರೆಸ್ಸೆಸ್ ಸಿದ್ಧಾಂತ ದೇಶದ ಹಿತಕ್ಕೆ ಮಾರಕ. ದೇಶಕ್ಕಾಗಲಿ ಅಥವಾ ಜನತೆಗಾಗಲಿ ಆರೆಸ್ಸೆಸ್ ಸಿದ್ಧಾಂತ ಒಳ್ಳೆಯದಲ್ಲ ಎಂದು ಜನತಾ ದರ್ಬಾರ್‌ನಲ್ಲಿ ತಿಳಿಸಿದ್ದಾರೆ.
 
ಬಿಜೆಪಿಯನ್ನು ತಡೆಯುವುದೇ ನಮ್ಮೆಲ್ಲರ ಗುರಿಯಾಗಬೇಕು. ಬಿಜೆಪಿ ಅಧಿಕಾರದಲ್ಲಿದ್ದಲ್ಲಿ ಸಾಮಾಜಿಕ ಸಾಮರಸ್ಯತೆಗೆ ಧಕ್ಕೆ ಬರುತ್ತದೆ. ಬಿಜೆಪಿಯೊಂದಿಗೆ ನಾವು ಮೈತ್ರಿ ಹೊಂದಿದಾಗಲು ಸಿದ್ಧಾಂತಗಳೊಂದಿಗೆ ರಾಜೀ ಮಾಡಿಕೊಂಡಿಲ್ಲ ಎಂದರು.
 

Share this Story:

Follow Webdunia kannada