Select Your Language

Notifications

webdunia
webdunia
webdunia
webdunia

ಮಾಜಿ ಸಿಎಂ ಮಾಯಾವತಿಗಿಂತ ರಿಕ್ಷಾ ಚಾಲಕ ಉತ್ತಮ: ದಯಾಶಂಕರ್ ಸಿಂಗ್

ಮಾಜಿ ಸಿಎಂ ಮಾಯಾವತಿಗಿಂತ ರಿಕ್ಷಾ ಚಾಲಕ ಉತ್ತಮ: ದಯಾಶಂಕರ್ ಸಿಂಗ್
ಬಲಿಯಾ , ಶುಕ್ರವಾರ, 23 ಸೆಪ್ಟಂಬರ್ 2016 (11:59 IST)
ಬಹಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಜಿ ಮುಖ್ಯಮಂತ್ರಿ ಮಾಯಾವತಿ ರಿಕ್ಷಾ ಚಾಲಕರಿಗಿಂತ ಕೀಳಾಗಿದ್ದಾಳೆ ಎಂದು ಬಿಜೆಪಿ ಉಚ್ಚಾಟಿತ ನಾಯಕ ದಯಾಶಂಕರ್ ಸಿಂಗ್ ಟೀಕಿಸಿದ್ದಾರೆ.
 
ಮಾಜಿ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿ ಬಿಜೆಪಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ದಯಾಶಂಕರ್ ಸಿಂಗ್ ಇದೀಗ ಮತ್ತೊಮ್ಮೆ ಮಾಯಾವತಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.  
 
ಉತ್ತರಪ್ರದೇಶದಲ್ಲಿ ಕೇವಲ ಸಮಾಜವಾದ ಪಕ್ಷದ ಮುಖಂಡರ ಮಾತುಗಳಿಗೆ ಬೆಲೆಯಿರುವುದರಿಂದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ರಾಖಿ ಕಟ್ಟಲು ನಾನು ಸಿದ್ದಳಾಗಿದ್ದೇನೆ ಎಂದು ದಯಾಶಂಕರ್ ಪತ್ನಿ ಸ್ವಾತಿ ಸಿಂಗ್ ತಿಳಿಸಿದ್ದಾರೆ.  
 
ರಿಕ್ಷಾ ಚಾಲಕ ಒಂದು ಬಾರಿ ಪ್ರಯಾಣಿಕನೊಂದಿಗೆ ಬಾಡಿಗೆ ಒಪ್ಪಂದವಾದ ನಂತರ ಮತ್ತೆ ಕೇಳುವುದಿಲ್ಲ. ಆದರೆ, ಮಾಯಾವತಿಗೆ ನಿರಂತರ ಹಣದ ದಾಹವಿರುತ್ತದೆ ಎಂದು ಲೇವಡಿ ಮಾಡಿದ್ದಾರೆ.
 
ಮಾಯಾವತಿ ಪಕ್ಷದ ಟಿಕೆಟ್‌ಗಳನ್ನು ಹಣಕ್ಕಾಗಿ ಮಾರಾಟ ಮಾಡುವಲ್ಲಿ ನಿರತರಾಗಿದ್ದಾರೆ. ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಟಿಕೆಟ್ ನೀಡಲಾಗುತ್ತಿದೆ. ಹಣಕ್ಕಾಗಿ ಏನು ಬೇಕಾದರು ಮಾಡಲು ಮಾಯಾವತಿ ಸಿದ್ದರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
 
ಕಳೆದ ಜುಲೈ 29 ರಂದು ಮಾಯಾವತಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದರಿಂದ ಜೈಲುವಾಸ ಅನುಭವಿಸಿದ ದಯಾಶಂಕರ್ ಸಿಂಗ್, ಬಿಜೆಪಿ ಪಕ್ಷದಿಂದಲೂ ಉಚ್ಚಾಟನೆಗೊಂಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ಗಂಟೆ ಮಾತ್ರ ವಿಶೇಷ ಅಧಿವೇಶನ