Webdunia - Bharat's app for daily news and videos

Install App

ರಾಷ್ಟ್ರಪತಿ ಭವನದಲ್ಲಿ ಈಗ ಸಸ್ಯಾಹಾರ ಮಾತ್ರ! ಕಾರಣವೇನು ಗೊತ್ತಾ?

Webdunia
ಸೋಮವಾರ, 21 ಆಗಸ್ಟ್ 2017 (09:47 IST)
ನವದೆಹಲಿ: ರಾಷ್ಟ್ರಪತಿ ಹುದ್ದೆ  ಎಂಬುದು ದೇಶದ ಪರಮೋಚ್ಛ ಹುದ್ದೆ. ರಾಷ್ಟ್ರಪತಿ ಭವನಕ್ಕೂ ಅಷ್ಟೇ ಪ್ರಾಮುಖ್ಯತೆಯಿದೆ. ಇದೀಗ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಸ ರಾಷ್ಟ್ರಪತಿ ಭವನ ಸಂಪೂರ್ಣ ಸಸ್ಯಾಹಾರವಾಗಿದೆ!

 
ರಾಷ್ಟ್ರಪತಿಗಳ ಸೇವೆಗೆಂದೇ ಸುಪ್ರಸಿದ್ಧ ಬಾಣಸಿಗರ ತಂಡ ರಾಷ್ಟ್ರಪತಿ ಭವನದ ಅಡುಗೆ ಮನೆಯಲ್ಲಿರುತ್ತದೆ. ಆದರೆ ಈ ಅಡುಗೆ  ಮನೆಯಲ್ಲಿ ಈಗ ನಾನ್ ವೆಜ್, ಮಸಾಲ ಭರಿತ ಆಹಾರಗಳಿಗೆ ಜಾಗವಿಲ್ಲವಂತೆ!

ಅದಕ್ಕೆ ಕಾರಣ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಹಾರ ಶೈಲಿ. ಸಂಪೂರ್ಣ ಸಸ್ಯಾಹಾರಿಯಾಗಿರುವ ಕೋವಿಂದ್ ತರಕಾರಿ ಬಳಸಿ ಮಾಡುವ ಅಡುಗೆಯನ್ನೇ ಇಷ್ಟಪಡುತ್ತಾರಂತೆ. ಅಷ್ಟೇ ಅಲ್ಲ, ಮಸಾಲ ಪದಾರ್ಥಗಳನ್ನು ಹಾಕಿದ ಆಹಾರಗಳನ್ನು ಅವರು ಇಷ್ಟಪಡುವುದಿಲ್ಲವಂತೆ. ಅಲ್ಲದೆ, ಕಡಿಮೆ ಉಪ್ಪು ಬಳಸಿ ಆಹಾರ ಸೇವಿಸುತ್ತಾರಂತೆ.

ರಾಷ್ಟ್ರಪತಿ ಹುದ್ದೆಯಲ್ಲಿರುವವರು ರಾಷ್ಟ್ರಪತಿ ಭವನದಲ್ಲಿ ಇರುವ ಬಾಣಸಿಗರ ಹೊರತಾಗಿ ತಮ್ಮ ಇಷ್ಟದ ಅಡುಗೆಯವರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಅವರಿಗಿಂತ ಮೊದಲು ರಾಷ್ಟ್ರಪತಿಯಾಗಿದ್ದ ಪ್ರತಿಭಾ ದೇವಿ ಸಿಂಗ್ ಕೂಡಾ ವೈಯಕ್ತಿಕ ಬಾಣಸಿಗರನ್ನು ಹೊಂದಿದ್ದರು.

ಆದರೆ ರಾಮನಾಥ್ ಗೆ ಅಡುಗೆ ವಿಷಯದಲ್ಲಿ ಅಷ್ಟೊಂದು ಅಪೇಕ್ಷಗಳಿಲ್ಲ. ಸರಳ, ತರಕಾರಿ ಹಾಕಿ ಮಾಡುವ ಸಾದಾ ಸೀದಾ ಅಡುಗೆಯನ್ನೇ ನೀಡುವಂತೆ ರಾಷ್ಟ್ರಪತಿ ಭವನದ ಬಾಣಸಿಗರಿಗೆ ಕಟ್ಟಪ್ಪಣೆಯಾಗಿದೆ ಎಂದು ಮೂಲಗಳು ಆಂಗ್ಲ ವಾಹಿನಿಯೊಂದರಲ್ಲಿ ಹೇಳಿವೆ.

ಇದನ್ನೂ ಓದಿ.. ಪೂಜಾ ಗಾಂಧಿ ಕಾಣೆಯಾಗಿದ್ದು ನಿಜಾನಾ?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments