Select Your Language

Notifications

webdunia
webdunia
webdunia
webdunia

ರಾಮ್ ಗೋಪಾಲ್ ಯಾದವ್‌ನಿಂದ ಜೀವಬೆದರಿಕೆ: ಅಮರ್ ಸಿಂಗ್

ರಾಮ್ ಗೋಪಾಲ್ ಯಾದವ್‌ನಿಂದ ಜೀವಬೆದರಿಕೆ: ಅಮರ್ ಸಿಂಗ್
ವಾರಣಾಸಿ , ಸೋಮವಾರ, 23 ಜನವರಿ 2017 (10:11 IST)
ಉತ್ತರ ಪ್ರದೇಶದಲ್ಲಿ ರಾಜಕೀಯ ಪ್ರಹಸನ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಮಾವ ರಾಮ್ ಗೋಪಾಲ್ ಯಾದವ್ ಅವರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಆರೋಪಿಸಿದ್ದಾರೆ. 
ವಾರಣಾಸಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಿಂಗ್,  ರಾಮಗೋಪಾಲ್ ನನ್ನ ಮೇಲೆ ಗುರಿ ಇಟ್ಟಿದ್ದಾರೆ. ಬಹಿರಂಗವಾಗಿ ಜೀವಬೆದರಿಕೆ ಒಡ್ಡಿದ್ದಾರೆ. ಹೀಗಾಗಿ ನನಗೆ ಝಡ್ ಕ್ಲಾಸ್ ಭದ್ರತೆಯನ್ನೊದಗಿಸಲಾಗಿದೆ ಎಂದು ಹೇಳಿದ್ದಾರೆ. 
 
ಪಕ್ಷದಲ್ಲಿನ ಆಂತರಿಕ ಕಲಹಕ್ಕೆ ತಮ್ಮೆಡೆ ಬೆಟ್ಟು ತೋರಿಸುತ್ತಿರುವುದಕ್ಕೆ ಕಿಡಿಕಾರಿದ ಅವರು, ತಮಗೆ, ಮುಲಾಯಂ ಸಿಂಗ್ ಯಾದವ್, ಶಿವಪಾಲ್ ಯಾದವ್ ಅವರಿಗೆ ಬಾಗಿಲು ತೋರಿಸಿ ಆಗಿದೆ. ಸಮಾಜವಾದಿ ಪರಿವಾರದಲ್ಲಿನ ಬಿಕ್ಕಟ್ಟಿಗೆ ನಾನೇ ಕಾರಣ ಎಂದು ದೂರಲಾಗುತ್ತಿದೆ. ತನ್ನ ತಂದೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕಿತ್ತು ಅಖಿಲೇಶ್ ಆ ಸ್ಥಾನದಲ್ಲಿ ಆಸೀನರಾಗಿದ್ದಾರೆ. ತಂದೆ- ಮಗನ ಯುದ್ಧದಲ್ಲಿ ನಾನಿರುವೆನಾ ಎಂದು ನಾನು ಉತ್ತರ ಪ್ರದೇಶದ ಜನರಲ್ಲಿ ಕೇಳ ಬಯಸುತ್ತೇನೆ ಎಂದಿದ್ದಾರೆ. 
 
"ನಾನು ಕೆಲವು ಸಂದರ್ಭದಲ್ಲಿ ಅಖಿಲೇಶ್ ಯಾದವ್ ಅವರನ್ನು ಹೊಗಳಿದ್ದೇನೆ, ಅದರರ್ಥ ಅವರು ನನ್ನ ಉಚ್ಚಾಟನೆಯನ್ನು ರದ್ದುಗೊಳಿಸಲಿ ಎಂದು ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರ್ಥವಲ್ಲ, ಎಂದು ಸಿಂಗ್ ಸ್ಪಷ್ಟ ಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈನಲ್ಲಿ ಮುಂದುವರೆದ ಪ್ರತಿಭಟನೆ; ಪೊಲೀಸರನ್ನು ತಡೆಯಲು ರಾಷ್ಟ್ರಗೀತೆ ಅಸ್ತ್ರ