Select Your Language

Notifications

webdunia
webdunia
webdunia
webdunia

ಸಂಧಾನದಿಂದ ಬಾಬ್ರಿಮಸೀದಿ-ರಾಮಜನ್ಮಭೂಮಿ ವಿವಾದ ಇತ್ಯರ್ಥ ಸೂಕ್ತ: ಸುಪ್ರೀಂಕೋರ್ಟ್

ಸಂಧಾನದಿಂದ ಬಾಬ್ರಿಮಸೀದಿ-ರಾಮಜನ್ಮಭೂಮಿ ವಿವಾದ ಇತ್ಯರ್ಥ ಸೂಕ್ತ: ಸುಪ್ರೀಂಕೋರ್ಟ್
ನವದೆಹಲಿ , ಮಂಗಳವಾರ, 21 ಮಾರ್ಚ್ 2017 (17:18 IST)
ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಮತ್ತೆ ರಾಮಜನ್ಮಭೂಮಿ ವಿವಾದ ಗರಿಗೆದರಿದೆ. ಇದೀಗ ಸುಪ್ರೀಂಕೋರ್ಟ್, ವಿವಾದವನ್ನು ಸಂಧಾನದ ಮೂಲಕ ಇತ್ಯರ್ಥಗೊಳಿಸುವುದು ಸೂಕ್ತ ಎಂದು ಸಲಹೆ ನೀಡಿದೆ.  
 
ಉಭಯ ಸಮುದಾಯದವರು ಸಂಧಾನದ ಮೂಲಕ ರಾಮಮಂದಿರ ವಿವಾದ ಬಗೆಹರಿಸಿಕೊಳ್ಳುವಲ್ಲಿ ವಿಫಲವಾದಲ್ಲಿ ಮಧ್ಯಪ್ರವೇಶ ಮಾಡುವುದಾಗಿ ಕೋರ್ಟ್ ತಿಳಿಸಿದೆ. 
 
ಕಳೆದ ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಮಮಂದಿರ ವಿವಾದ, ಕೋರ್ಟ್ ಮೂಲಕ ಇತ್ಯರ್ಥವಾಗಲಿ ಎಂದು ಮುಸ್ಲಿಂ ಸಮುದಾಯದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು.
 
ರಾಮಮಂದಿರ ಮತ್ತು ಬಾಬ್ರಿ ಮಸೀದಿ ವಿವಾದ ಧಾರ್ಮಿಕ ಭಾವನೆಗಳು ಹೊಂದಿರುವ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದರಿಂದ, ಎರಡೂ ಸಮುದಾಯದವರು ಮುಕ್ತ ಮನಸ್ಸಿನಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸುವುದು ಸೂಕ್ತ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಿ.ಎಸ್.ಖೇಹರ್ ಸಲಹೆ ನೀಡಿದ್ದಾರೆ.  
 
ಬಾಬ್ರಿಮಸೀದಿ-ರಾಮಮಂದಿರ ವಿವಾದ ಮಾತುಕತೆಯಿಂದ ಪರಿಹಾರ ಅಸಾಧ್ಯ. ಆದ್ದರಿಂದ, ನ್ಯಾಯಾಂಗದ ಮೊರೆಹೋಗಿರುವುದಾಗಿ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕೋರ್ಟ್ ವಿಚಾರಣೆಯನ್ನು ಮಾರ್ಚ್ 31 ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸುಪ್ರೀಂಕೋರ್ಟ್‌ನಿಂದ ಕಾವೇರಿ ನೀರು ಹರಿಸುವ ಆದೇಶ ಮುಂದುವರಿಕೆ