Select Your Language

Notifications

webdunia
webdunia
webdunia
webdunia

ರಾಮನ ಹೆಸರು ಬರೆದು ಠೇವಣಿ ಇಟ್ಟವರಿಗೆ ಬಂಪರ್ ಆಫರ್ ಘೋಷಿಸಿದ ರಾಮ್ ನಾಮ್ ಬ್ಯಾಂಕ್

ರಾಮನ ಹೆಸರು ಬರೆದು ಠೇವಣಿ ಇಟ್ಟವರಿಗೆ ಬಂಪರ್ ಆಫರ್ ಘೋಷಿಸಿದ ರಾಮ್ ನಾಮ್ ಬ್ಯಾಂಕ್
ಲಕ್ನೋ , ಸೋಮವಾರ, 18 ನವೆಂಬರ್ 2019 (09:03 IST)
ಲಕ್ನೋ : ಸುಪ್ರೀಂ ಕೋರ್ಟ್ ನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ ಹಿನ್ನಲೆಯಲ್ಲಿ ರಾಮ್ ನಾಮ್ ಬ್ಯಾಂಕ್ ಗ್ರಾಹಕರಿಗೊಂದು ಬಂಪರ್ ಆಫರ್ ವೊಂದನ್ನು ಘೋಷಿಸಿದೆ.




ಈ ಬ್ಯಾಂಕಿನಲ್ಲಿ ಖಾತೆ ಹೊಂದಿದವರು ನವೆಂಬರ್ 9-10ರ ಮಧ್ಯರಾತ್ರಿ ವೇಳೆಗೆ ಬ್ಯಾಂಕ್ ನೀಡುವ ಬುಕ್ ಲೆಟ್ ಮೇಲೆ  ಕನಿಷ್ಠ 1.25 ಲಕ್ಷ ಬಾರಿ ರಾಮನ ಹೆಸರು ಬರೆದು ಬ್ಯಾಂಕ್ ನಲ್ಲಿ ಠೇವಣಿ ಇಟ್ಟರೆ ಅಂತವರಿಗೆ ಬೋನಸ್ ನೀಡಲಾಗುವುದು ಎಂದು ತಿಳಿಸಿದೆ. ಹಾಗೇ ಇದರಲ್ಲಿ ಆಯ್ಕೆಯಾದವರಿಗೆ 2020 ರ ಮಾಘ ಮೇಳದ ಸಂದರ್ಭದಲ್ಲಿ ಬಹುಮಾನ ನೀಡಲಾಗುವುದು ಎಂದು ತಿಳಿಸಿದೆ.


ಅಲಹಬಾದ್ ಮೂಲದ ರಾಮ್ ನಾಮ್ ಬ್ಯಾಂಕ್ ಎನ್ ಜಿಓ ಆಗಿದ್ದು, ಈ ಬ್ಯಾಂಕ್ ಎಟಿಎಂ ಅಥವಾ ಚೆಕ್ ಬುಕ್ ಹೊಂದಿಲ್ಲ. ಇದರ ಏಕೈಕ ಕರೆನ್ಸಿ ಕೂಡ ರಾಮನ ಹೆಸರಿನಲ್ಲಿದೆ. ರಾಮ ಮಂದಿರ ನಿರ್ಮಾಣದ ಅಂಗವಾಗಿ ಈ ಬ್ಯಾಂಕ್ ಈ ಅಭಿಯಾನವನ್ನು ನಡೆಸಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಯೊಂದಿಗೆ ಜಗಳಕ್ಕಿಳಿದ ಗಂಡ ಕೋಪದಿಂದ ಮಾಡಿದ್ದೇನು ಗೊತ್ತಾ?