Select Your Language

Notifications

webdunia
webdunia
webdunia
webdunia

ರಜನಿ ರಾಜಕೀಯ ಪ್ರವೇಶ ಪಕ್ಕಾ: ಚುರುಕುಗೊಂಡ ವಿದ್ಯಮಾನ

ರಜನಿ ರಾಜಕೀಯ ಪ್ರವೇಶ ಪಕ್ಕಾ: ಚುರುಕುಗೊಂಡ ವಿದ್ಯಮಾನ
ಚೆನ್ನೈ , ಸೋಮವಾರ, 19 ಜೂನ್ 2017 (15:39 IST)
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ನಿವಾಸದಲ್ಲಿ ಹಿಂದೂ ಮಕ್ಕಲ್ ಕಟ್ಟಿ ಸಂಘಟನೆಯ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಮೂಲಕ ರಜನಿಕಾಂತ್ ರಾಜಕೀಯ ಪ್ರವೇಶ ಧೃಡಪಟ್ಟಿದೆ ಎನ್ನಲಾಗುತ್ತಿದೆ. 
 
ಖಟ್ಟರ್ ಹಿಂದೂ ಸಂಘಟನೆಯಾದ ಹಿಂದೂ ಮಕ್ಕಲ್ ಕಟ್ಟಿ ಸಂಘಟನೆಯ ನಾಯಕ ಅರ್ಜುನ್ ಸಂಪತ್ ಮತ್ತು ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರನ್ನು ರಜನಿಕಾಂತ್ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.  ಭೇಟಿ ಬಳಿಕ ಹೇಳಿಕೆ ನೀಡಿರುವ ಅರ್ಜುನ್ ಸಂಪತ್ ಅವರು, ರಜನಿಕಾಂತ್ ಅವರಿಗೆ ನಾವು ಬೆಂಬಲ ನೀಡುತ್ತೇವೆ. ರಾಜಕೀಯ ಪ್ರವೇಶಿಸಿ ತಮಿಳುನಾಡು ರಾಜ್ಯಕ್ಕಾಗಿ ಒಳ್ಳೆಯ ಕೆಲಸಗಳನ್ನು ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ. ಅವರ ಪ್ರತಿಕ್ರಿಯೆ ಕೂಡ ಉತ್ತಮವಾಗಿತ್ತು. ತಮಿಳುನಾಡು ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಏನಾದರೂ ಮಾಡಬೇಕೆಂಬ ಆಸೆ ಅವರ ಮನಸ್ಸಿನಲ್ಲಿದೆ ಎಂದು ತಿಳಿಸಿದ್ದಾರೆ.
 
ಆದರೆ ಹಿಂದೂ ನಾಯಕರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್ ಅವರು, ಭೇಟಿಯೊಂದು ಕೇವಲ ಔಪಚಾರಿಕವಷ್ಟೇ ಎಂದು ಹೇಳಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಅದಕ್ಷ ಸಚಿವರಿಗೆ ಗೇಟ್‌ಪಾಸ್: ಹೊಸಬರಿಗೆ ಮಣೆ ಹಾಕಲಿರುವ ಪ್ರಧಾನಿ ಮೋದಿ?