Select Your Language

Notifications

webdunia
webdunia
webdunia
webdunia

ರೂಪಾಣಿ ವಿರುದ್ಧ ರಣಕಹಳೆ ಮೊಳಗಿಸಿ ಮಣ್ಣುಮುಕ್ಕಿದ ರಾಜಗುರು

ರೂಪಾಣಿ ವಿರುದ್ಧ ರಣಕಹಳೆ ಮೊಳಗಿಸಿ ಮಣ್ಣುಮುಕ್ಕಿದ ರಾಜಗುರು
, ಸೋಮವಾರ, 18 ಡಿಸೆಂಬರ್ 2017 (11:57 IST)
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರನ್ನು ಸೋಲಿಸಲು ರೂಪಾಣಿಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್‌ನ ಶ್ರೀಮಂತ ಶಾಸಕ ಇಂದ್ರನೀಲ್ ರಾಜುಗುರು ಮಣ್ಣುಮುಕ್ಕಿದ್ದಾರೆ.
 
ರಾಜಕೋಟ್ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಜಯಗಳಿಸಿದ್ದಾರೆ. ಅತ್ಯಂತ ಪ್ರತಿಷ್ಠೆಯ ಕ್ಷೇತ್ರವಾಗಿದ್ದ ಇಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.
 
2012ರಲ್ಲಿ ರಾಜಕೋಟ್ ಪೂರ್ವ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ರಾಜಗುರು ಅವರು ರೂಪಾಣಿ ಅವರಿಗೆ ನನ್ನ ವಿರುದ್ಧ ಸ್ಪರ್ಧಿಸಿ ಗೆದ್ದು ತೋರಿಸುವಂತೆ ಸಾರ್ವಜನಿಕವಾಗಿ ಸವಾಲು ಹಾಕಿದ್ದರು. ಆದರೆ, ಇದಕ್ಕೆ ರೂಪಾಣಿ ಅವರು ಪ್ರತಿಕ್ರಿಯೇ ನೀಡರಲಿಲ್ಲ. ಆದ್ದರಿಂದ ರಾಜಗುರು ಅವರು ರೂಪಾಣಿ ಸ್ಪರ್ಧಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ರಾಜಗುರು ರೂಪಾಣಿಯನ್ನು ಸೋಲಿಸುತ್ತೇನೆ ಎಂದು ರಣಕಹಳೆ ಮೊಳಗಿಸಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮತಯಂತ್ರ ತಿರುಚಲು ಬಿಜೆಪಿಯಿಂದ ಎಂಜಿನಿಯರ್‌ಗಳ ನೇಮಕ– ಹಾರ್ದಿಕ್ ಆರೋಪ