Webdunia - Bharat's app for daily news and videos

Install App

ನಗೆಪಾಟಲಿಗೀಡಾದ ರಾಹುಲ್ ಗಾಂಧಿ ವ್ಯಂಗ್ಯ!

Webdunia
ಗುರುವಾರ, 16 ನವೆಂಬರ್ 2017 (08:50 IST)
ಅಹಮ್ಮದಾಬಾದ್: ಗುಜರಾತ್ ಚುನಾವಣೆ ಪ್ರಚಾರಕ್ಕಾಗಿ ಗುಜರಾತ್ ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಆಗಾಗ ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ. ಆದರೆ ಈ ರೀತಿ ಅವರು ಟೀಕಿಸಿದ ಮಾತು ಅವರಿಗೇ ತಿರುಗುಬಾಣವಾಗಿದೆ.

 
ಚುನಾವಣಾ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿಯನ್ನು ತಮಾಷೆ ಮಾಡುತ್ತಾ ರಾಹುಲ್ ಗಾಂಧಿ ‘ನಾನು ಎಂತಹ ಮಿಷನ್ ತರುತ್ತೇನೆಂದರೆ, ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ, ಆ ಬದಿಯಿಂದ ಚಿನ್ನದ ಗಟ್ಟಿ ಬಂದು ಬೀಳುತ್ತದೆ’ ಎಂದಿದ್ದರು.

ಪ್ರಧಾನಿ ಮೋದಿ ಈ ರೀತಿ ಜನರನ್ನು ಮರಳು ಮಾಡುತ್ತಾರೆಂದು ತಮಾಷೆ ಮಾಡಲು ಹೋದ ರಾಹುಲ್ ಮೋದಿ ಅಭಿಮಾನಿಗಳಿಂದ ತಾವೇ ತಮಾಷೆಯ ವಸ್ತುವಾಗಿದ್ದಾರೆ.  ನೋಡಿ ರಾಹುಲ್ ಗಾಂಧಿ ಚಿನ್ನ ಮಾರುತ್ತಿರುವ ಹೊಸ ಫೋಟೋ ಎಂದು ಕೆಲವರು ತಮಾಷೆ ಮಾಡಿದರೆ ಇನ್ನು ಕೆಲವರು, ರಾಹುಲ್ ಗಾಂಧಿ ದೇಶದ ಬೆಸ್ಟ್ ಕಾಮೆಡಿಯನ್ ಎಂದು ನಾನು ಹೇಳುವಾಗ ನಿಮಗೆ ಯಾರಿಗಾದರೂ ಕೋಪ ಬಂದರೆ ಕ್ಷಮೆಯಿರಲಿ ಎಂದು ಕಾಲೆಳೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments