Select Your Language

Notifications

webdunia
webdunia
webdunia
webdunia

ಬಿಜೆಪಿ ವಿರುದ್ಧ ಹೋರಾಡಲು ಉಪನಿಷತ್ ಓದುತ್ತಿದ್ದಾರಂತೆ ರಾಹುಲ್ ಗಾಂಧಿ!

ಬಿಜೆಪಿ ವಿರುದ್ಧ ಹೋರಾಡಲು ಉಪನಿಷತ್ ಓದುತ್ತಿದ್ದಾರಂತೆ ರಾಹುಲ್ ಗಾಂಧಿ!
Chennai , ಸೋಮವಾರ, 5 ಜೂನ್ 2017 (09:29 IST)
ಚೆನ್ನೈ: ‘ನಾನೀಗ ಭಗವದ್ಗೀತೆ, ಉಪನಿಷತ್ ಓದುತ್ತಿದ್ದೇನೆ. ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ಧ ಹೋರಾಡಲು ನಾನು ಇವುಗಳನ್ನು ಓದುತ್ತಿದ್ದೇನೆ’ ಹಾಗಂತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.

 
ಚೆನ್ನೈನಲ್ಲಿ ಮಾತನಾಡಿದ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ. ‘ಆರ್ ಎಸ್ಎಸ್ ನ ಗೆಳೆಯರೇ, ನೀವು ಜನರನ್ನು ತುಳಿಯುತ್ತಿದ್ದೀರಿ. ದೌರ್ಜನ್ಯ ಎಸಗುತ್ತಿದ್ದೀರಿ. ಆದರೆ ಉಪನಿಷತ್ ಎಲ್ಲರೂ ಸಮಾನರು ಎನ್ನುತ್ತದೆ. ನೀವು ನಿಮ್ಮ ಧರ್ಮಕ್ಕೆ ವಿರುದ್ಧವಾದುದನ್ನು ಏಕೆ ಮಾಡುತ್ತಿದ್ದೀರಿ’ ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ಬಿಜೆಪಿ ‘ಭಾರತ’ ಎನ್ನುವ ಶಬ್ಧವನ್ನೇ ಅರ್ಥಮಾಡಿಕೊಂಡಿಲ್ಲ. ಸಂಪೂರ್ಣ ತಿಳುವಳಿಕೆ ಬಂದಿರುವುದೇ ನರೇಂದ್ರ ಮೋದಿಯಿಂದ ಎಂದು ಬಿಜೆಪಿಯವರು ನಂಬಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗಾಗಿ ಕಾಯುತ್ತಿದ್ದವರಿಗೆ ನಿರಾಸೆ!