ತಪಸ್ಸು ಎಂದರೇನು, ರಾಹುಲ್ ಗಾಂಧಿ ಭಾಷಣಕ್ಕೆ ಜೋರಾಗಿ ನಕ್ಕ ಆಡಳಿತ ಪಕ್ಷದ ಸದಸ್ಯರು (video)

Krishnaveni K
ಶನಿವಾರ, 14 ಡಿಸೆಂಬರ್ 2024 (15:11 IST)
ನವದೆಹಲಿ: ಲೋಕಸಭೆಯಲ್ಲಿ ಇಂದು ರಾಹುಲ್ ಗಾಂಧಿ ಭಾಷಣದ ವೇಳೆ ತಪಸ್ಸು ಎಂದರೇನು ಎಂದು ಮಾಡಿದ ಭಾಷಣವನ್ನು ಕೇಳಿ ಆಡಳಿತ ಪಕ್ಷದ ಸದಸ್ಯರು ಜೋರಾಗಿ ನಕ್ಕ ಘಟನೆ ನಡೆದಿದೆ.

ಲೋಕಸಭೆ ಕಲಾಪದಲ್ಲಿ ಇಂದು ರಾಹುಲ್ ಗಾಂಧಿ ತಮ್ಮ ಸರದಿ ಬಂದಾಗ ಸುದೀರ್ಘವಾಗಿ ಮಾತನಾಡಿದ್ದಾರೆ. ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಸಂವಿಧಾನದ ಮಹತ್ವದ ಬಗ್ಗೆ ಸುದೀರ್ಘ ಮಾತನಾಡಿದ್ದಾರೆ. ನಡುವೆ ತಪಸ್ಸು ಎಂದರೇನು ಎಂದು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಕೊಟ್ಟಿದ್ದಾರೆ.

‘ಧನುಷ್ ನಲ್ಲಿ ತಪಸ್ಸಿದೆ. ಮನ್ ರೇಗದ ಕೆಲಸ ಮಾಡುವುದರಲ್ಲಿ ತಪಸ್ಸಿದೆ. ನಿಮಗೆ ಇದು ಅರ್ಥವಾಗಲ್ಲ. ತಪಸ್ಸು ಎಂದರೆ ಏನು ಗೊತ್ತಾ, ಶರೀರದಲ್ಲಿ ಶಾಖ ಉತ್ಪನ್ನ ಮಾಡುವುದಾಗಿದೆ’ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಂತೆ ಆಡಳಿತ ಪಕ್ಷದ ಸಂಸದರು ಬಿದ್ದು ಬಿದ್ದು ನಕ್ಕರು.

ಇನ್ನೊಮ್ಮೆ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳು ಕತ್ತರಿಸಿದರು ಎಂದು ಎಡವಟ್ಟು ಮಾಡಿದರು. ಆಗ ದ್ರೋಣಾಚಾರ್ಯರು ಏಕಲವ್ಯನ ಬೆರಳು ಕತ್ತಿರಸಲಿಲ್ಲ ಎಂದು ಆಡಳಿತ ಪಕ್ಷದ ಸಂಸದರು ತಿದ್ದಿದರು. ಆಗ ಸರಿಪಡಿಸಿಕೊಂಡ ರಾಹುಲ್ ಗಾಂಧಿ ದ್ರೋಣಾಚಾರ್ಯರು ಏಕಲವ್ಯನ ಬೆರಳು ಕತ್ತರಿಸುವಂತೆ ಮಾಡಿದ್ದಕ್ಕೆ ಎಂದು ತಿದ್ದಿಕೊಂಡರು. ದ್ರೋಣಾಚಾರ್ಯರು ಮಾಡಿದಂತೆ ಕೇಂದ್ರ ಸರ್ಕಾರವೂ ಅದಾನಿಯಂತಹ ಉದ್ಯಮಿಗಳಿಗೆ ನೆರವು ನೀಡುತ್ತದೆ, ಸಣ್ಣ ಉದ್ದಿಮೆದಾರರ ಬೆರಳು ಕತ್ತರಿಸುತ್ತದೆ ಎಂದು ಹೋಲಿಕೆ ಮಾಡಿ ವಾಗ್ದಾಳಿ ನಡೆಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂಗಳನ್ನು ಟಾರ್ಗೆಟ್ ಮಾಡಲಾಗಿದೆ: ಡಿಸಿಎಂ ಪವನ್ ಕಲ್ಯಾಣ್

ರಾಜ್ಯದಲ್ಲಿರುವ ಡ್ರಗ್ಸ್‌ ದಂಧೆ ವಿರುದ್ಧ ಕಠಿಣ ಕ್ರಮ, ಪೆಡ್ಲರ್‌ಗಳಿಗೆ ನಡುಕ

ಮತ್ತಷ್ಟು ಹಣ ಕೊಡದಿದ್ದರೆ ಬೆತ್ತಲೆ ಫೋಟೋ ವೈರಲ್ ಬೆದರಿಕೆ, ಯುವಕ ಆತ್ಮಹತ್ಯೆ

ಮೋದಿ ಬಳಿಕ ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿ ಯಾರು: ಕೊನೆಗೂ ತಿಳಿಸಿದ ಮೋಹನ್ ಭಾಗವತ್

ಸಿದ್ದರಾಮಯ್ಯ ಇರುವಷ್ಟು ದಿನ ಉತ್ತಮ ಹೆಜ್ಜೆ ಇಡಲಿ: ವಿಜಯೇಂದ್ರ

ಮುಂದಿನ ಸುದ್ದಿ
Show comments