Select Your Language

Notifications

webdunia
webdunia
webdunia
webdunia

ಪನ್ನೀರ್‌ಸೆಲ್ವಂಗೆ ಜೀವ ಬೆದರಿಕೆ: ಶಶಿಕಲಾ ಬೆಂಬಲಿಗನ ವಿರುದ್ಧ ದೂರು ದಾಖಲು

ಪನ್ನೀರ್‌ಸೆಲ್ವಂಗೆ ಜೀವ ಬೆದರಿಕೆ: ಶಶಿಕಲಾ ಬೆಂಬಲಿಗನ ವಿರುದ್ಧ ದೂರು ದಾಖಲು
ಚೆನ್ನೈ , ಸೋಮವಾರ, 13 ಫೆಬ್ರವರಿ 2017 (17:02 IST)
ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪದ ಮೇಲೆ ಶಶಿಕಲಾ ಪರ ಹಿರಿಯ ಮುಖಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
 
ಎಐಎಡಿಎಂಕೆ ದಕ್ಷಿಣ ಚೆನ್ನೈನ ಕಾರ್ಯದರ್ಶಿ, ಮಾಜಿ ಶಾಸಕ ವಿ.ಪಿ.ಕಲೈರಾಜನ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  
 
ಆದರೆ, ಪನ್ನೀರ್‌ಸೆಲ್ವಂಗೆ ಜೀವ ಬೆದರಿಕೆಯೊಡ್ಡಿರುವುದನ್ನು ತಳ್ಳಿಹಾಕಿದ ವಿ.ಪಿ.ಕಲೈರಾಜನ್, ಇದೊಂದು ಸೇಡಿನ ರಾಜಕೀಯಕ್ಕೆ ಉದಾಹರಣೆ ಎಂದು ತಿರುಗೇಟು ನೀಡಿದ್ದಾರೆ. 
 
ಇತ್ತೀಚೆಗೆ ಶಶಿಕಲಾ ವಿರುದ್ಧ ಪನ್ನೀರ್‌ಸೆಲ್ವಂ ಬಹಿರಂಗ ಸಮರ ಸಾರಿದಾಗ ಕಲೈರಾಜನ್ ಸೆಲ್ವಂ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.  
 
ಕಳೆದ ಫೆಬ್ರವರಿ 5 ರಂದು ಶಶಿಕಲಾ ನಟರಾಜನ್ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ನಂತರ ಪನ್ನೀರ್ ಸೆಲ್ವಂ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಶಶಿಕಲಾ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲಾಗಿತ್ತು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

5 ವರ್ಷದ ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ