ಬಡವರ ಕಲ್ಯಾಣಕ್ಕೆ ಆದ್ಯತೆ: ಮೋದಿ

Webdunia
ಮಂಗಳವಾರ, 1 ಫೆಬ್ರವರಿ 2022 (15:06 IST)
ನವದೆಹಲಿ : ಈ ಬಾರಿಯ ಬಜೆಟ್ನ ಮಹತ್ವಪೂರ್ಣ ಘಟ್ಟವೆಂದರೆ ಬಡವರ ಕಲ್ಯಾಣ.

ಪ್ರತಿಯೊಬ್ಬ ಬಡವನಲ್ಲೂ ಸುಸಜ್ಜಿತ ಮನೆ ಇರಬೇಕು, ಅದರಲ್ಲಿ ನಲ್ಲಿಯ ವ್ಯವಸ್ಥೆ, ಶೌಚಾಲಯ, ಗ್ಯಾಸ್ ವ್ಯವಸ್ಥೆ ಈ ಎಲ್ಲಾ ವಿಷಯಗಳ ಬಗ್ಗೆ ವಿಶೇಷ ಗಮನ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಬಜೆಟ್ ಬಗೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಆಧುನಿಕತೆ ಬಂದಿದೆ. ಟೆಕ್ನಾಲಜಿ, ಕಿಸಾನ್ ಡ್ರೋನ್, ವಂದೇ ಭಾರತ್ ರೈಲು, ಡಿಜಿಟಲ್ ಕರೆನ್ಸಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ಯುನಿಟ್ಗಳು, ಡಿಜಿಟಲ್ ಪರಿಸರ ವ್ಯವಸ್ಥೆ ಬರಲಿದೆ. ಯುವ, ಮಧ್ಯಮ, ಬಡವರು, ದಲಿತರು, ಎನ್ನುವ ತಾರತಮ್ಯ ಇಲ್ಲದೇ ಎಲ್ಲರಿಗೂ ಈ ಸೇವೆ ಲಭ್ಯವಾಗಲಿದೆ ಎಂದು ಪ್ರಧಾನಿ ತಿಳಿಸಿದರು.

ಆಧುನಿಕ ಇಂಟರ್ನೆಟ್ ಸಂಪರ್ಕದ ಬಗೆಯೂ ಅಷ್ಟೇ ಮಹತ್ವ ನೀಡಲಾಗಿದೆ. ದೇಶದ ಎತ್ತರದ ಪ್ರದೇಶಗಳಾದ ಹಿಮಾಲಯ, ಜಮ್ಮು ಕಾಶ್ಮೀರಗಳಲ್ಲಿ ಜನಜೀವನ ಸರಳವಾಗಬೇಕು. ಆ ಪ್ರದೇಶಗಳಿಂದ ಜನರು ಪಲಾಯನಗೈಯುವಂತಾಗಬಾರದು. ಇವುಗಳನ್ನು ಗಮನದಲ್ಲಿರಿಸಿಕೊಂಡೇ ಹೊಸ ಘೋಷಣೆಗಳನ್ನು ಮಾಡಲಾಗಿದೆ.

ಭಾರತದ ಎತ್ತರದ ಪ್ರದೇಶಗಳಿಗಾಗಿ ಪರ್ವತ್ ಮಾಲಾ ಯೋಜನೆ ತರಲಾಗಿದೆ. ಇದು ಸಾರಿಗೆ ಹಾಗೂ ಸಂಪರ್ಕದ ಆಧುನಿಕ ವ್ಯವಸ್ಥೆಯ ನಿರ್ಮಾಣ ಮಾಡುತ್ತದೆ. ಇದರಿಂದ ಗಡಿ ಪ್ರದೇಶದ ಜನರಿಗೂ ದೊಡ್ಡ ಮಟ್ಟದ ಬಲ ದೊರೆಯುತ್ತದೆ ಎಂದು ತಿಳಿಸಿದರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮೋದಿ ವಿದೇಶಕ್ಕೆ ಹೋಗಲ್ವಾ, ರಾಹುಲ್ ಹೋದ್ರೆ ತಪ್ಪೇನು ಎಂದ ಮಲ್ಲಿಕಾರ್ಜುನ ಖರ್ಗೆ: ಯಾಕೆ ಹೋಗ್ತಾರೆ ಎಂದ ನೆಟ್ಟಿಗರು

ಜಾತಿ ಸರ್ಟಿಫಿಕೇಟ್ ಪಡೆಯುವುದು ಹೇಗೆ, ಯಾವ ದಾಖಲೆಗಳು ಬೇಕು ಇಲ್ಲಿದೆ ಮಾಹಿತಿ

ಡಿಕೆ ಶಿವಕುಮಾರ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ರಹಸ್ಯ ಮೀಟಿಂಗ್: ನಡೆದಿದ್ದೇನು

ಮುಂದಿನ ಸುದ್ದಿ
Show comments