Select Your Language

Notifications

webdunia
webdunia
webdunia
webdunia

ಏ.5ರಂದು ಎಲ್ಲರೂ ಒಂದಾಗಿ ಜ್ಯೋತಿ ಬೆಳಗಿಸಿ ಭಾರತ ಗೆಲ್ಲಿಸಿ- ಪ್ರಧಾನಿ ಮೋದಿ ಕರೆ

ಏ.5ರಂದು ಎಲ್ಲರೂ ಒಂದಾಗಿ ಜ್ಯೋತಿ ಬೆಳಗಿಸಿ ಭಾರತ ಗೆಲ್ಲಿಸಿ- ಪ್ರಧಾನಿ ಮೋದಿ ಕರೆ
ನವದೆಹಲಿ , ಶುಕ್ರವಾರ, 3 ಏಪ್ರಿಲ್ 2020 (09:30 IST)
ನವದೆಹಲಿ : ಏ.5ರಂದು ಎಲ್ಲರೂ ಒಂದಾಗೋಣ. ದೀಪ ಹಚ್ಚಿ ಭಾರತ ಗೆಲ್ಲಿಸಿ ಎಂದು  ದೇಶದ ಜನತೆಗೆ ಪ್ರದಾನಿ ಮೋದಿ ಕರೆನೀಡಿದ್ದಾರೆ.


ಇಂದು ಬೆಳಿಗ್ಗೆ 9 ಗಂಟೆಗೆ ಪ್ರಧಾನಿ ಮೋದಿ ಅವರು ಜನರಿಗೆ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಲಿರುವುದಾಗಿ ಹೇಳಿದ್ದು, ಆ ವೇಳೆ ಮಾತನಾಡಿದ ಅವರು, ಈ ಭಾನುವಾರ ನಮಗೆ ಮಹತ್ವದ ದಿನ. ಏ.5ಕ್ಕೆ ರಾತ್ರಿ 9ಕ್ಕೆ ನಿಮ್ಮ 9 ನಿಮಿಷ ಬೇಕು. ಮನೆಯಲ್ಲಿ ಲೈಟ್ ಆರಿಸಿ, ದೀಪ ಬೆಳಗಿಸಿ. ನಿಮ್ಮ ಮನೆಗಳಲ್ಲಿ ಮೊಂಬತ್ತಿ ಬೆಳಗಿಸಿ. ಟಾರ್ಚ್ ಅಥವಾ ಮೊಬೈಲ್ ಪ್ಲಾಶ್ ಲೈಟ್ ಬೆಳಗಿಸಿ. ಲೈಟ್ ಆರಿಸಿ ಹೊಸ ಬೆಳಕು ಬೆಳಗಿಸಿ. ಆ ಬೆಳಕಿನ ಮಹಾ ಶಕ್ತಿ ಅನುಭವವಾಗುತ್ತೆ.


ಬೆಳಕಿನಿಂದ ನಿಮ್ಮ ಮನಸ್ಸು ಮತ್ತಷ್ಟು ಗಟ್ಟಿಯಾಗುತ್ತೆ. ಯಾರೂ ಒಂಟಿಯಲ್ಲ ಎಂಬ ಭಾವನೆ ಗಟ್ಟಿಯಾಗುತ್ತೆ. 130 ಕೋಟಿ ಜನ ಒಂದೇ ದೃಢಸಂಕಲ್ಪ ಮಾಡಿ  ಎಂದು ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ಸರ್ಕಾರದ ನಿರ್ಲಕ್ಷ್ಯದಿಂದಲೇ ಕಾಸರಗೋಡಿನಲ್ಲಿ ಅತೀ ಹೆಚ್ಚು ಸೋಂಕು?