Select Your Language

Notifications

webdunia
webdunia
webdunia
webdunia

ಕಂಬಳ ಕ್ರೀಡೆ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ

ಕಂಬಳ ಕ್ರೀಡೆ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ
ನವದೆಹಲಿ , ಮಂಗಳವಾರ, 4 ಜುಲೈ 2017 (07:15 IST)
ನವದೆಹಲಿ:ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ರಾಜ್ಯಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ನೆಗೆ ರಾಷ್ಟ್ರಪತಿ ಅಂಕಿತಹಾಕಿದ್ದು, ಈ ಮೂಲಕ ಕಂಬಳ ಉಳಿವಿಗಾಗಿ ನಡೆದ ಹೋರಾಟಕ್ಕೆ ಜಯಸಿಕ್ಕಂತಾಗಿದೆ.
 
ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿ ತಂಕೋಲನ್ ಹೌಕಿಪ್ ಅಂಕಿತ ಹಾಕಿ ರಾಜ್ಯಕ್ಕೆ ರವಾನಿಸಿದ್ದಾರೆ. ಈ ಕಡತಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಜೂ.29ರಂದೇ ಸಹಿ ಹಾಕಿದ್ದರು. ಕಂಬಳದ ಜತೆ ಉತ್ತರ ಕರ್ನಾಟಕಗದ ಚಕ್ಕಡಿ ಓಟ ಸ್ಪರ್ಧೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
 
ಕಂಬಳ ಕ್ರೀಡೆಗೆ ಸುಗ್ರೀವಾಜ್ನೆ ಪ್ರಕಟವಾದ ಕಾರಣ ಕಂಬಳ ಕ್ರೀಡೆ ಆಯೋಜನೆಗೆ ಯಾವುದೇ ಅಡ್ಡಿ ಆತಂಕವಿಲ್ಲ. ಎರಡೂ ಕಡತಗಳು ರಾಜ್ಯಕ್ಕೆ ಬಂದ ಬಳಿಕ ಸಂಸದೀಯ ಕಾರ್ಯದರ್ಶಿ, ಹಾಗೂ ರಾಜ್ಯಪಾಲರು, ಮುಖ್ಯಮಂತ್ರಿ, ಕಾರ್ಯದರ್ಶಿಗೆ ರವಾನೆಯಾಗಲಿದೆ. ರಾಜ್ಯಕ್ಕೆ ಕಳುಹಿಸಿರು ಅ ಕಂಬಳ ತಿದ್ದುಪಡಿ ಮಸೂದೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಗಜೆಟ್ ನೋಟಿಫಿಕೇಷನ್ ಆಗುವ ಮೂಲಕ ಕಾನೂನಾಗಿ ಮಾರ್ಪಾಡಾಗಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಂಬಳ ಕ್ರೀಡೆ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ