Webdunia - Bharat's app for daily news and videos

Install App

ಎಎಪಿ ಮುಖ್ಯ ಮೌಲ್ಯಗಳ ಜತೆ ರಾಜಿಗೆ ಬದಲು ಸಾವೇ ಮೇಲು: ಕೇಜ್ರಿವಾಲ್

Webdunia
ಶುಕ್ರವಾರ, 2 ಸೆಪ್ಟಂಬರ್ 2016 (18:50 IST)
ವಜಾಗೊಂಡ ಸಚಿವ ಸಂದೀಪ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷದ ಮುಖ್ಯ ಮೌಲ್ಯಗಳಿಗೆ ಕುಮಾರ್ ವಂಚನೆ ಮಾಡಿದ್ದಾರೆಂದು ಟೀಕಿಸಿದರು.
 
ತನ್ನ ಮೌಲ್ಯಗಳ ಜತೆ ಎಎಪಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರತಿಪಾದಿಸಿದ ಅವರು ಭ್ರಷ್ಟಾಚಾರ ಮತ್ತು ತಪ್ಪುಎಸಗಿದವರ ವಿರುದ್ಧ ಕ್ರಮಕ್ಕೆ ಉದಾಸೀನ ತೋರುವ ಎದುರಾಳಿ ಪಕ್ಷಗಳನ್ನು ಅವರು ಟೀಕಿಸಿದರು.
 
ಎಎಪಿಯ ತತ್ವಗಳಿಂದ ದೂರವುಳಿಯುವ ಬದಲಿಗೆ ತಾನು ಸಾವಿಗೆ ಆದ್ಯತೆ ನೀಡುವುದಾಗಿ ವಿಡಿಯೊ ಸಂದೇಶದಲ್ಲಿ ತಿಳಿಸಿದ ಕೇಜ್ರಿವಾಲ್, ಇದೇ ನಿಯಮ ತಮಗಲ್ಲದೇ ಪಕ್ಷದ ಇತರೆ ಹಿರಿಯ ನಾಯಕರಿಗೂ ಅನ್ವಯಿಸುತ್ತದೆಂದು ತಿಳಿಸಿದರು. 
 
 ಸಂದೀಪ್ ಕುಮಾರ್ ಪಕ್ಷಕ್ಕೆ ವಂಚಿಸಿದರು. ಎಎಪಿ ಅಭಿಯಾನಕ್ಕೆ ಮತ್ತು ಜನರು ಎಎಪಿ ಮೇಲೆ ಇರಿಸಿದ್ದ ನಂಬಿಕೆಗೆ ವಂಚನೆ ಮಾಡಿದರು ಎಂದು ಕೇಜ್ರಿವಾಲ್ ನೋವಿನಿಂದ ಹೇಳಿದರು.
 
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಗಳನ್ನು ಹೊಂದಿದ್ದ ಕುಮಾರ್  ಮಹಿಳೆಯ ಜತೆ ಆಕ್ಷೇಪಾರ್ಹ ಭಂಗಿಯಲ್ಲಿದ್ದ ಸಿಡಿಯನ್ನು ಕೇಜ್ರಿವಾಲ್ ಸ್ವೀಕರಿಸಿದ ಮೇಲೆ ಸಚಿವ ಸ್ಥಾನದಿಂದ ಕುಮಾರ್ ಅವರನ್ನು ವಜಾ ಮಾಡಿದ್ದರು. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟರ್ಕಿ ಮೇಲೆ ಒಂದೊಂದೆ ಪ್ರತೀಕಾರ ತೀರಿಸುತ್ತಿರುವ ಭಾರತ: ವಿಮಾನಯಾನ ಸಂಸ್ಥೆಯ ಲೈಸನ್ಸ್‌ ರದ್ದು ಮಾಡಿದ ಭಾರತ

ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಬೆಳಗಾವಿಯಲ್ಲಿ ವಿಜಯ್ ಶಾ ವಿರುದ್ಧ ದೂರು

ಸೇನಾಧಿಕಾರಿ ಖುರೇಷಿ ಅತ್ತೆ ಮಾವನ ಮನೆ ಮೇಲೆ ದಾಳಿ ಪೋಸ್ಟ್‌: ಮೂವರ ವಿರುದ್ಧ ಪ್ರಕರಣ ದಾಖಲು

ಬರ್ತಡೇ ಆಚರಿಸಲ್ಲ ಅಂತಾ ಹೇಳಿ ನೆನಪಿನಲ್ಲಿ ಉಳಿದುಕೊಳ್ಳುವ ಹಾಗೇ ದಿನ ಕಳೆದ ಡಿಸಿಎಂ ಡಿಕೆ ಶಿವಕುಮಾರ್‌: Video

ಪಾಕ್‌ಗೆ ಸಹಾಯ ಮಾಡಿದ ಟರ್ಕಿ: ಟರ್ಕಿ ಆ್ಯಪಲ್ ಬ್ಯಾನ್ ಮಾಡಲು ಭಾರತದಲ್ಲಿ ಹೆಚ್ಚಿದ ಒತ್ತಾಯ

ಮುಂದಿನ ಸುದ್ದಿ
Show comments