Webdunia - Bharat's app for daily news and videos

Install App

ಗೆದ್ದ ಖುಷಿಯಲ್ಲಿರುವ ಪ್ರಧಾನಿ ಮೋದಿಗೆ ಪ್ರಕಾಶ್ ರೈ ‘ಒಗ್ಗರಣೆ’

Webdunia
ಸೋಮವಾರ, 18 ಡಿಸೆಂಬರ್ 2017 (16:18 IST)
ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಖುಷಿಯಲ್ಲಿರುವ ಪ್ರಧಾನಿ ಮೋದಿಗೆ ನಟ ಪ್ರಕಾಶ್ ರೈ  ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೊಂದು ಒಗ್ಗರಣೆಯನ್ನೂ ಹಾಕಿದ್ದಾರೆ.
 

ಬಹುಭಾಷಾ ತಾರೆ ಕಳೆದ ಕೆಲವು ದಿನಗಳಿಂದ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಕೆಲವು ನಾಯಕರ ನೀತಿ ವಿರುದ್ಧ ಕಿಡಿ ಕಾರುತ್ತಲೇ ಇದ್ದರು. ಇದೀಗ ಜಯ ಗಳಿಸಿರುವ ಮೋದಿಗೆ ಅಭಿನಂದನೆ ಸಲ್ಲಿಸಿರುವವ ಪ್ರಕಾಶ್ ರೈ ‘ಆದರೆ ಗೆಲುವು ನಿಜವಾಗಿಯೂ ನಿಮಗೆ ಖುಷಿ ಕೊಟ್ಟಿದೆಯೇ?’ ಎಂದು ಕೆಣಕಿದ್ದಾರೆ.

ಎಲ್ಲಿ ಹೋಯ್ತು ನೀವು ಕೊಚ್ಚಿಕೊಳ್ಳುತ್ತಿದ್ದ 150 ಪ್ಲಸ್ ಸೀಟು? ನೀವು ಕ್ಲೀನ್ ಸ್ವೀಪ್ ಮಾಡಬೇಕಿತ್ತಲ್ಲವೇ? ಎಂದು ಟ್ವಿಟರ್ ಪ್ರಶ್ನಿಸಿರುವ ಪ್ರಕಾಶ್ ರೈ ಅದಕ್ಕೆ ಕೆಲವು ಕಾರಣಗಳನ್ನೂ ಪಟ್ಟಿ ಮಾಡಿದ್ದಾರೆ.

ನಿಮ್ಮ ಈ ಕಡಿಮೆ ಅಂತರದ ಗೆಲುವಿಗೆ ಕಾರಣ, ಜಾತಿ ರಾಜಕಾರಣ ನಡೆಯಲ್ಲ, ನಮ್ಮ ದೇಶದಲ್ಲಿ ಪಾಕಿಸ್ತಾನ, ಜಾತಿ, ಧರ್ಮಕ್ಕಿಂತ ಮಿಗಿಲಾದ ಸಮಸ್ಯೆಗಳಿವೆ, ಬಡವರ ಧ್ವನಿ ಕೊಂಚ ಹೆಚ್ಚಾಗಿದೆ ಎಂದರ್ಥ ಎಂದು ಕುಟುಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments