ಭಾರತದಂತಹ ಬಡ ದೇಶದಿಂದ ಭ್ರಷ್ಟಾಚಾರದ ವಿಲಾಸಿತತೆಯನ್ನು ಹೊರಲಾಗದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭ್ರಷ್ಟಾಚಾರ ನಮ್ಮ ವ್ಯವಸ್ಥೆಯಲ್ಲಿ ಇರಬೇಕಾದ ಅಗತ್ಯವಲ್ಲ. ದೇಶ ನೀತಿ ಚಾಲಿತವಾಗಿರಬೇಕು. ಹೊರತು ವ್ಯಕ್ತಿಯೊಬ್ಬನ ಮನದಿಚ್ಛೆಯಂತೆ ಅಲ್ಲ ಎಂದಿದ್ದಾರೆ ಪ್ರಧಾನಿ.
ಭ್ರಷ್ಟಾಚಾರ ನಿರೋಧದ ಕುರಿತಾದ ಒಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದ ಅವರು, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸದಾ ಸಿದ್ಧರಾಗಿರಿ ಎಂದು ಕರೆ ನೀಡಿದ್ದಾರೆ.
ನಾವು ನಿಯಮ ರೂಪಿಸುವಾಗ ಅಸ್ಪಷ್ಟತೆ ಇದ್ದರೆ, ಆಗದು ಹಸ್ತಕ್ಷೇಪಕ್ಕೆ ತೆರೆದಿರುತ್ತದೆ, ಮತ್ತದು ಭ್ರಷ್ಟಾಚಾರಕ್ಕೆ ಕದ ತೆರೆಯುತ್ತದೆ. ದೇಶ ನೀತಿ ಚಾಲಿತವಾಗಿರಬೇಕು. ವ್ಯಕ್ತಿಯ ಆಶೋತ್ತರಗಳ ಮೇಲಲ್ಲ. ರಾಜ್ಯ ನೀತಿಯ ಮೇಲೆ ನಡೆದರೆ ಆದರೆಗಿದರೆಗಳ ಮೇಲೆ ನಿಯಂತ್ರಣವಿರುತ್ತದೆ. ಯಾವುದೇ ಹಸ್ತಕ್ಷೇಪವಿಲ್ಲದಿದ್ದರೆ ತಾರತಮ್ಯದ ಪ್ರಶ್ನೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ