Select Your Language

Notifications

webdunia
webdunia
webdunia
webdunia

ಸಿಎಂ ಜಯಲಲಿತಾ ಚೇತರಿಕೆಗೆ ಪ್ರಧಾನಿ, ರಾಷ್ಟ್ರಪತಿಗಳ ಹಾರೈಕೆ

ಸಿಎಂ ಜಯಲಲಿತಾ ಚೇತರಿಕೆಗೆ ಪ್ರಧಾನಿ, ರಾಷ್ಟ್ರಪತಿಗಳ ಹಾರೈಕೆ
Chennai , ಸೋಮವಾರ, 5 ಡಿಸೆಂಬರ್ 2016 (05:58 IST)
ನವದೆಹಲಿ: ತಮಿಳುನಾಡು ಸಿಎಂ ಜಯಲಲಿತಾ ಹೃದಯಾಘಾತಕ್ಕೊಳಗಾಗಿರುವ ಹಿನ್ನಲೆಯಲ್ಲಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ರಾಜ್ಯ, ರಾಷ್ಟ್ರ ರಾಜಕೀಯ ನಾಯಕರು ಟ್ವಿಟರ್ ಮೂಲಕ ಹಾರೈಸಿದ್ದಾರೆ.

ಜಯಲಲಿತಾ ಹೃದಯಾಘಾತಕ್ಕೊಳಗಾದ ಸುದ್ದಿ ಕೇಳಿ ಬೇಸರವಾಗಿದೆ. ಆಕೆ ಶೀಘ್ರ ಗುಣಮುಖರಾಗಲಿ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಟ್ವೀಟ್ ಮಾಡಿದ್ದಾರೆ.  ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡಾ ಟ್ವೀಟ್ ಮಾಡಿದ್ದು, ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಚೇತರಿಕೆಗೆ ನಾವೆಲ್ಲಾ ಹಾರೈಸೋಣ ಎಂದಿದ್ದಾರೆ.

ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಟ್ವೀಟ್ ನಲ್ಲಿ ನನ್ನ ಆತ್ಮೀಯ ಜಯಲಲಿತಾಗೆ ಹೃದಾಘಾತವಾಗಿರುವುದು ತೀವ್ರ ನೋವು ತಂದಿದೆ. ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದಿದ್ದಾರೆ.

ಇನ್ನು ಜಯಲಲಿತಾ ರಾಜಕೀಯ ಕಟ್ಟಾ ವೈರಿ ಮಾಜಿ ಸಿಎಂ ಕರುಣಾನಿಧಿ ಕೂಡಾ ಜಯಲಲಿತಾ ಗುಣಮುಖರಾಗುವಂತೆ ಹಾರೈಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಅಮ್ಮ’ನಿಗೆ ಹೃದಯಾಘಾತ: ತಮಿಳುನಾಡು ಸ್ಥಿತಿ ಗಂಭೀರ