Select Your Language

Notifications

webdunia
webdunia
webdunia
webdunia

‘ಅಮ್ಮ’ನಿಗೆ ಹೃದಯಾಘಾತ: ತಮಿಳುನಾಡು ಸ್ಥಿತಿ ಗಂಭೀರ

‘ಅಮ್ಮ’ನಿಗೆ ಹೃದಯಾಘಾತ: ತಮಿಳುನಾಡು ಸ್ಥಿತಿ ಗಂಭೀರ
Chennai , ಸೋಮವಾರ, 5 ಡಿಸೆಂಬರ್ 2016 (05:42 IST)
ಚೆನ್ನೈ: ಸಿಎಂ ಜಯಲಲಿತಾಗೆ ಹೃದಯಾಘಾತ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಅಪೋಲೋ ಆಸ್ಪತ್ರೆಯ ಹೊರ ಆವರಣದಲ್ಲಿ ಅಮ್ಮನ ಆರೋಗ್ಯದ ಬಗ್ಗೆ ತಿಳಿಯಲು ಜಮಾಯಿಸಿದ್ದ ಜನರ ನಡುವೆ ಸಣ್ಣ ಮಟ್ಟಿನ ಹಿಂಸಾಚಾರವಾದ ಬಗ್ಗೆಯೂ ವರದಿಯಾಗಿದೆ.

ಈ ಹಿನ್ನಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿಗಳ ಟ್ವಿಟರ್ ಖಾತೆಯಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ. ಅಲ್ಲದೆ ಅಮ್ಮನ ಬಗ್ಗೆ ಯಾವುದೇ ಇಲ್ಲದ ಸುದ್ದಿ ಹರಡಬೇಡಿ ಎಂದು ಮನವಿ ಮಾಡಿದ್ದಾರೆ.

ಇಂತಹ ಸೂಕ್ಷ್ಮ ಸ್ಥಿತಿಯಲ್ಲಿ ಜನರು ಭಾವೋದ್ರೇಕಕ್ಕೊಳಗಾಗುವ ಸಾಧ್ಯತೆ ಹೆಚ್ಚಿರುವುದರಿಂದ ಹಿಂಸಾಚಾರಗಳು ನಡೆಯುವ ಸಂಭವ ಹೆಚ್ಚು. ಹೀಗಾಗಿ ತಮಿಳಿನಾಡಿನಾದ್ಯಂತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ನಾಡು ಸಿಎಂ ಜಯಲಲಿತಾಗೆ ಹೃದಯಾಘಾತ!